Select Your Language

Notifications

webdunia
webdunia
webdunia
webdunia

ವರುಣಾದಿಂದ ಸ್ಪರ್ಧಿಸುವುದಿಲ್ಲ, ಅದು ಮುಗಿದ ಅಧ್ಯಾಯ : ಸೋಮಣ್ಣ

ವರುಣಾದಿಂದ ಸ್ಪರ್ಧಿಸುವುದಿಲ್ಲ, ಅದು ಮುಗಿದ ಅಧ್ಯಾಯ : ಸೋಮಣ್ಣ
ಬೆಂಗಳೂರು , ಮಂಗಳವಾರ, 11 ಏಪ್ರಿಲ್ 2023 (09:36 IST)
ಬೆಂಗಳೂರು : ನಾನು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ, ಅದು ಮುಗಿದ ಅಧ್ಯಾಯ, ನಾನು ಕೇಳಿರೋದು ಚಾಮರಾಜನಗರ, ಗೋವಿಂದರಾಜನಗರವಾಗಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.
 
ಇದರಲ್ಲಿ ಚಾಮರಾಜನಗರ, ಗೋವಿಂದರಾಜನಗರದಲ್ಲಿ ಒಂದನ್ನು ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ವರುಣಾದಿಂದ ಸ್ಪರ್ಧೆ ಇಲ್ಲ. ಇದು ಹೈಕಮಾಂಡ್ಗೆ ಕೂಡ ಗೊತ್ತಿದೆ. ಹೈಕಮಾಂಡ್ ಏನು ಮಾಡುತ್ತೆ ನೋಡೋಣ ಎಂದು ಹೇಳಿದರು.

ಬೇರೆ ಅವರ ಮಕ್ಕಳಿಗೆ ಟಿಕೆಟ್ ಕೊಟ್ಟರೆ ನನ್ನ ಮಗನಿಗೂ ಟಿಕೆಟ್ ಕೊಡಿ, ಸಾಕಷ್ಟು ನಾಯಕರ ಮಕ್ಕಳು ಟಿಕೆಟ್ ಕೇಳುತ್ತಿದ್ದಾರೆ. ಅದಕ್ಕೆ ನಾನು ಕೇಳಿದ್ದೀನಿ, ಕೇಳೋದ್ರಲ್ಲಿ ಏನು ತಪ್ಪಿಲ್ಲ. ಹೈಕಮಾಂಡ್ ನಾಯಕರ ಭೇಟಿ ಮಾಡಿದ್ದೀನಿ, ಯಾರ್ಯಾರಿಗೆ ಮನವರಿಕೆ ಮಾಡಬೇಕೋ ಅವರಿಗೆ ಮನವರಿಕೆ ಆಗಿದೆ. ಹೇಗೆ ಮಾಡ್ತಾರೆ ನೋಡೋಣ. ನನ್ನ ಮಗನಿಗೂ ಕೊಡ್ತಾರಾ ನೋಡ್ತೀನಿ. ಬೇರೆ ಅವರಿಗೆ ಕೊಡೋದ್ರಿಂದ ನಾನು ಗುಬ್ಬಿಗೆ ಟಿಕೆಟ್ ಕೊಡಿ ಅಂತ ಕೇಳಿದ್ದೀನಿ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಹಣ ಕೊಟ್ಟಿಲ್ಲ, ಸ್ಟಾಲಿನ್ 1 ಲಕ್ಷ ಚೆಕ್ ಕೊಟ್ಟಿದ್ದಾರೆ : ಬೊಮ್ಮನ್