Webdunia - Bharat's app for daily news and videos

Install App

ನಾಳೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೇ ಅರಂಭ ,!

Webdunia
ಬುಧವಾರ, 12 ಏಪ್ರಿಲ್ 2023 (19:22 IST)
ರಾಜ್ಯದಲ್ಲಿ ಈಗ ಬೇಸಿಗೆಯ ಕಾವು ಮಾತ್ರ ಹೆಚ್ಚಾಗ್ತಿಲ್ಲ. ಚುನಾವಣಾ ಕಾವು ಬೇಸಿಗೆಯನ್ನೇ ಓವರ್‌ಟೇಕ್ ಮಾಡುವಷ್ಟು ಹೆಚ್ಚಾಗಿದೆ. ಹವಾಮಾನಕ್ಕೆ ತಕ್ಕಂತೆ ಸ್ಥಳ ಬದಲಿಸೋ ಪಕ್ಷಿಗಳಂತೆ, ಅಧಿಕಾರಕ್ಕಾಗಿ ಪಕ್ಷ ಬದಲಿಸೋ ರಾಜಕಾರಣಿಗಳ ಚದುರಂಗದಾಟವೂ ಆರಂಭವಾಗಿದೆ. ಅವರು ಹೇಳಿದ್ದೇ ಫೈನಲ್ ಎಂದುಕೊಂಡಿದ್ದ ರಾಜಕೀಯ ನಿಪುಣರ ಲೆಕ್ಕಾಚಾರ ಈಗಾಗಲೇ ತಲೆಕೆಳಗಾಗುತ್ತಿದೆ. ಇದೆಲ್ಲದರ ಮಧ್ಯ ಚುನಾವಣಾ ಆಯೋಗ ನಾಳೆಯಿಂದ ನಾಮಪತ್ರ ಸಲ್ಲಿಕೆಗೆ  ಬೇಕಿರೋ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. 

ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ನಾಳೆಯಿಂದ 7 ದಿನಗಳ ಕಾಲ ಅಂದ್ರೆ ಏಪ್ರಿಲ್ 13 ರಿಂದ 20 ರವರೆಗೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ಬೇಕಿರೋ ರಿಟರ್ನಿಂಗ್ ಆಫೀಸ್‌ಗಳನ್ನೂ ಈಗಾಗಲೇ ಚುನಾವಣಾ ಆಯೋಗ ಸ್ಥಾಪಿಸಿದೆ. ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಆರ್‌ಓ ಆಫೀಸ್‌ಗಳನ್ನು ನಿರ್ಮಿಸಲಾಗಿದ್ದು, ನಾಳೆಯಿಂದ ಮತ್ತೊಂದು ಹಂತದ ರಾಜಕೀಯದಾಟ ಆರಂಭವಾಗಲಿದೆ.,ಇನ್ನೂ ಪ್ರತಿ ನಾಮಪತ್ರ ಸಲ್ಲಿಕೆ ಕೇಂದ್ರಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಜೊತೆ 5 ಜನರಿಗೆ ಮಾತ್ರ ನಾಮಪತ್ರ ಕೇಂದ್ರದ ಒಳಗೆ ಪ್ರವೇಶ ನೀಡಲಾಗಿದೆ, ನಾಮಪತ್ರ ಸಲ್ಲಿಸುವ ವೇಳೆ ವಿಡಿಯೋ ರೇಕರ್ಡಿಂಗ್ ಮಾಡಲಾಗುತ್ತೆ , ಹಾಗೂ ಪ್ರತಿ ಕೇಂದ್ರದ ಸೂತ್ತಮುತ್ತ ಸಿಸಿ ಕ್ಯಾಮಾರ್ ಅಳವಾಡಿಕೆ ಮಾಡಲಾಗಿದೆ, ಇನ್ನು, ಕಳೆದೆಲ್ಲಾ ಚುನಾವಣೆಗಳಿಗಿಂತ ಈ ಚುನಾವಣೆ ಖಂಡಿತವಾಗಿಯೂ ವಿಭಿನ್ನವಾಗಿರಲಿದೆ. ಬಿಜೆಪಿ ಪಕ್ಷ ತನ್ನ ಸರ್ಕಾರ ರಚಿಸೋಕೆ ಕಾಂಗ್ರೆಸ್ ಹಾಗು ಜೆಡಿಎಸ್ ನಾಯಕರನ್ನು ಆಪರೇಶನ್ ಮಾಡಿದ ನಂತರದ ಮೊದಲನೇ ಚುನಾವಣೆ ಇದಾಗಿದ್ದು, ಯಾವೆಲ್ಲಾ ಅಭ್ಯರ್ಥಿಗಳು ಇನ್ನು ಏನೇನು ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ ರಘುವಂಶಿ ಹತ್ಯೆಯಾಗುವ ಮುನ್ನ ಪತ್ನಿ ಸೋನಂ ಜೊತೆಗಿದ್ದ ವಿಡಿಯೋ ವೈರಲ್

ಹಾಸನದ ಬೆನ್ನಲ್ಲೇ ಬೆಂಗಳೂರಿನ ಕೆಲವು ಶಾಲೆಗಳಿಗೆ ಬಾಂಬ್‌ ಬೆದರಿಕೆ: ರಾಜ್ಯ ರಾಜಧಾನಿಯಲ್ಲಿ ಹೈಲರ್ಟ್‌

Israel-Iran conflict: ಇರಾನ್‌ನಲ್ಲಿ ಮೃತರ ಸಂಖ್ಯೆ 230ಕ್ಕೆ ಏರಿಕೆ: 1,277ಕ್ಕೂ ಅಧಿಕ ಮಂದಿ ಗಾಯ

Karnataka Rains: ಮಂಗಳೂರಿನಲ್ಲಿ ಈಗ ಇರೋದು ರೋಡಲ್ಲ ಎಲ್ಲಾ ತೋಡು

16ನೇ ಜನಗಣತಿಗೆ ಮೂಹೂರ್ತ ಫಿಕ್ಸ್‌: ಜಾತಿಗಣತಿಗೂ ಗ್ರೀನ್‌ಸಿಗ್ನಲ್‌, ಎಷ್ಟು ಹಂತದಲ್ಲಿ ನಡೆಯುತ್ತೆ ಗೊತ್ತಾ

ಮುಂದಿನ ಸುದ್ದಿ
Show comments