Select Your Language

Notifications

webdunia
webdunia
webdunia
webdunia

ಜೈ ಶ್ರೀರಾಮ್ ಅಲ್ಲ, ಓನ್ಲೀ ಅಲ್ಲಾಹು ಅಕ್ಬರ್! ಅನ್ಯ ಕೋಮಿನ ಯುವಕರಿಂದ ಹಲ್ಲೆ

Hindu attacked

Krishnaveni K

ಬೆಂಗಳೂರು , ಗುರುವಾರ, 18 ಏಪ್ರಿಲ್ 2024 (08:42 IST)
Photo Courtesy: Instagram
ಬೆಂಗಳೂರು: ರಾಮನವಮಿ ಆಚರಿಸಿಕೊಂಡು ಕಾರಿನಲ್ಲಿ ತೆರಳುತ್ತಿದ್ದವರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದ ಬೆಟ್ಟಳ್ಳಿ ಮಸೀದಿ ಬಳಿ ನಡೆದಿದೆ.

ರಾಹುಲ್ ಮತ್ತು ಪವನ್ ಎಂಬ ಇಬ್ಬರು ಯುವಕರು ಕಾರಿನಲ್ಲಿ ತೆರಳುತ್ತಿದ್ದವರು ಭಗವಧ‍್ವಜ ಹಿಡಿದು ಜೈಶ್ರೀರಾಮ್ ಎನ್ನುತ್ತಾ ಸಾಗುತ್ತಿದ್ದರು. ಈ ವೇಳೆ ಮಸೀದಿ ಬಳಿ ಅನ್ಯಕೋಮಿನ ಯುವಕರಿಬ್ಬರು ಕಾರು ಅಡ್ಡಗಟ್ಟಿ, ಜೈಶ್ರೀರಾಮ್ ಅನ್ನಬೇಕಾ? ಜೈಶ್ರೀರಾಮ್ ಎಲ್ಲ ಇಲ್ಲ. ಓನ್ಲೀ ಅಲ್ಲಾಹು ಅಕ್ಬರ್ ಎಂದು ನಿಂದಿಸಿದ್ದಾರೆ.

ಈ ವೇಳೆ ಕಾರಿನಲ್ಲಿದ್ದ ಯುವಕರು ನಿಮ್ಮ ಹಬ್ಬದ ವೇಳೆ ನಾವು ಹೀಗೆ ಮಾಡುತ್ತೇವಾ ಎಂದು ಪ್ರಶ್ನಿಸಿದ್ದಾರೆ. ಕಾರಿನಲ್ಲಿದ್ದ ಯುವಕರು ಈ ರೀತಿ ಪ್ರಶ್ನೆ ಮಾಡಿ ಕಾರಿನಿಂದ ಇಳಿದಿದ್ದಾರೆ. ಈ ವೇಳೆ ಅನ್ಯಕೋಮಿನ ಮತ್ತಷ್ಟು ಯುವಕರು ಜೊತೆ ಸೇರಿದ್ದು ಕಾರಿನಲ್ಲಿದ್ದವರಿಗೆ ಹಲ್ಲೆ ಮಾಡಿದ್ದಾರೆ.

ಕಾರಿನಲ್ಲಿ ಒಟ್ಟು ಮೂವರು ಯುವಕರಿದ್ದರು. ಇವರ ಮೇಲೆ ಹಲ್ಲೆಯಾಗಿದೆ. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿ ಯುವಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಘಟನೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡರ ಸಭೆಯಲ್ಲಿ ಕೈ ಕಾರ್ಯಕರ್ತರ ದಾಂಧಲೆ ಆರೋಪ: ಡಿಕೆಶಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು