Webdunia - Bharat's app for daily news and videos

Install App

ಕೊರೊನಾ ಎಫೆಕ್ಟ್: ಮಾರುಕಟ್ಟೆಗಳಲ್ಲಿ ಸಿಗ್ತಿಲ್ಲ ತರಹೇವಾರಿ ರಾಖಿಗಳು!

Webdunia
ಭಾನುವಾರ, 22 ಆಗಸ್ಟ್ 2021 (16:40 IST)
ಸಹೋದರರ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡುವ ನಿಸ್ವಾರ್ಥ ಸಂಬಂಧದ ಪ್ರತೀಕವೇ ರಾಖಿ ಹಬ್ಬ. ಇಂದು ನಾಡಿನಾದ್ಯಂತ ರಾಖಿ ಹಬ್ಬದ ಸಂಭ್ರಮ. ಕರೊನಾದ ಛಾಯೆ ಹಿನ್ನಲೆ, ನಗರದಲ್ಲಿ ಅಷ್ಟೊಂದು ಅದ್ದೂರಿಯಾಗಿ ಹಬ್ಬವನ್ನು ಆಚರಣೆ ಮಾಡಲಿಲ್ಲ. ಪ್ರತಿವರ್ಷದಂತೆ ವೆರೈಟಿ ರಾಖಿಗಳು ಸಹ ಮಾರ್ಕೆಟ್ ಗಳಲ್ಲಿ ಇಲ್ಲ.
ರಕ್ಷಾ ಬಂಧನ ಹೆಣ್ಣು ಮಕ್ಕಳಿಗೆ ತವರಿನ ನಂಟು ಭದ್ರ‍ಪಡಿಸುವ ಹಬ್ಬ. ಜತೆಗೆ ಇದು ಭ್ರಾತೃತ್ವದ ಭಾವ ಬೆಸೆಯುವ ಸೇತುವೆ.
ಪ್ರತಿವರ್ಷ ನೂಲು ಹುಣ್ಣಿಮೆ ದಿನ ರಾಖಿ ಹಬ್ಬವನ್ನು ಅದ್ದೂರಿಯಾಗಿ, ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತೆ. ಆದ್ರೆ ಕಳೆದ ಎರಡು ವರ್ಷದಿಂದ ಸರಿಯಾಗಿ ಹಬ್ಬವನ್ನೇ ಆಚರಣೆ ಮಾಡೋಕೆ ಆಗ್ತಾ ಇಲ್ಲ. ಯಾಕಂದ್ರೆ, ಕರೊನಾದ ಕರಿನೆರಳು ಎಲ್ಲ ಹಬ್ಬಗಳ ಮೇಲೆ‌ಬಿದ್ದಿದ್ದು, ಜನರ ಮನೆಯಿಂದ ಹೊರಬರದಂತಹ ಪರಿಸ್ಥಿತಿ ಬಂದೊದಗಿದೆ. ವ್ಯಾಪಾರ-ವಹಿವಾಟು ಇಲ್ಲದೇ, ರಾಖಿ ಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿದ್ದು, ವ್ಯಾಪಾರಿಗಳು ಸಹ ಕಂಗಾಲಾಗಿದ್ದಾರೆ.
ಪ್ರತಿವರ್ಷ ಮಾರುಕಟ್ಟೆಗಳಿಗೆ ವೆರೈಟಿ, ವೆರೈಟಿ ರಾಖಿಗಳು
ಬರ್ತಾ ಇದ್ವು.‌ ಆದರೆ, ಎರಡು ವರ್ಷದಿಂದ ಕರೊನಾ ಇರೋ ಹಿನ್ನಲೆ, ವ್ಯಾಪಾರವಹಿವಾಟುಗಳು ಸರಿಯಾಗಿ ನಡೆದಿಲ್ಲ. ಕಳೆದ ವರ್ಷದ ರಾಖಿಗಳು ಇದೂವರೆಗೂ ಸೇಲ್ ಆಗಿಲ್ಲ. ಇನ್ನು ಈ ವರ್ಷ ಯಾವುದರ ಆಧಾರದ ಮೇಲೆ ರಾಖಿ ತರೋದು ಅಂತಾ ವ್ಯಾಪಾರಿಗಳು ಸುಮ್ಮನಾಗಿದ್ದಾರೆ. ಇದ್ರಿಂದ ಮಾರ್ಕೆಟ್ ಗಳಲ್ಲಿ ಸರಿಯಾಗಿ  ವಿಧವಿಧವಾದ ರಾಖಿಗಳು ಸಿಗ್ತಾ ಇಲ್ಲ.‌ ರಕ್ಷಣೆ ಮಾಡುವ ಪ್ರತಿಯೊಬ್ಬ ಪುರುಷನಿಗೆ ಸ್ತ್ರೀಯರು ನೂಲಿನ ರೂಪದಲ್ಲಿ ದಾರ, ರಾಖಿ ಕಟ್ಟುವುದು ಸಂಪ್ರದಾಯ. ಹೀಗಾಗೀ ಕರೊನಾದ ನಡುವೆ ಸರಳವಾಗಿ ರಾಖಿ ಹಬ್ಬ ಆಚರಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಸ್ಮಾ ಜಾರಿ ಮಾಡಿದ್ರೂ ಹೆದರಲ್ಲ: ಆ.5ರಂದು ಸಾರಿಗೆ ಸೇವೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜಗದೀಪ್ ಧನಕರ್ ರಾಜೀನಾಮೆ: ಉಪ ರಾಷ್ಟ್ರಪತಿ ಹುದ್ದೆಯ ಚುನಾವಣಾ ಪ್ರಕ್ರಿಯೆ ಆರಂಭಿಸಿದ ಆಯೋಗ

ಧರ್ಮಸ್ಥಳ ಪ್ರಕರಣ: ರಾಜ್ಯ ಸರ್ಕಾರದಿಂದ ಎಸ್‌ಐಟಿಗೆ 20 ಪೊಲೀಸ್ ಅಧಿಕಾರಿಗಳ ನಿಯೋಜನೆ

ಬಾ ನಲ್ಲ ಮಧುಚಂದ್ರಕೆ ಪ್ರಕರಣ: ಪತಿ ಕೊಂದು ಜೈಲು ಸೇರಿದ್ದ ಸೋನಂ ನಡವಳಿಕೆಗೆ ಶಾಕ್

ಸುಳ್ಳು, ವಂಚನೆ ಮಾಡೋದೇ ಕಾಂಗ್ರೆಸ್ ಸರ್ಕಾರದ ಕೆಲಸ: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments