Select Your Language

Notifications

webdunia
webdunia
webdunia
webdunia

ಬೆಂಗಳೂರು-ಮೈಸೂರು ರಸ್ತೆ ‘ಪ್ರತಾಪ’ ಕೊಚ್ಚಿಕೊಳ್ಳುವುದಲ್ಲ: ಸಿಂಹಗೆ ಕುಟುಕಿದ ಹಳ್ಳಿಹಕ್ಕಿ

bengaluru mysore vishwanath
bengaluru , ಭಾನುವಾರ, 22 ಆಗಸ್ಟ್ 2021 (14:16 IST)
ಬೆಂಗಳೂರು ಮತ್ತು ಮೈಸೂರು 6 ಪಥ ರ ಸ್ತೆ ಅಭಿವೃದ್ಧಿ ಸಂಸದ ಪ್ರತಾಪ್ ಸಿಂಹ ಅವರ ಸಾಧನೆಯಲ್ಲ. ಇದು ಹಿಂದೆ ಇದ್ದ ಯುಪಿಎ ಮತ್ತು ಸಿದ್ದರಾಮಯ್ಯ ಅವರ ಸಾಧನೆ ಎಂದು ಎಚ್.ವಿಶ್ವನಾಥ್ ಕುಟುಕಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮದೇ ಪಕ್ಷದ ಸಂಸದ ಪ್ರತಾಪ್ ಸಿಂಹ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಪ್ರತಾಪ್ ಸಿಂಹ ಹೇಳಿಕೆ ಸರಿ ಅಲ್ಲ. ನಾನೇ ಮಾಡಿಬಿಟ್ಟೆ ಅನ್ನೋದು ಸರಿ ಅಲ್ಲ. ಪಾಪ ಹೆಣ್ಣು ಮಗಳು ಹೇಳಿದ್ದು ಸರಿ ಇದೆ. ಪ್ರತಾಪ್ ಸಿಂಹ ನಾನು‌ ಮಾಡಿದೆ ನಾನು ಕಡಿದು ಹಾಕಿದೆ ಅಂತ ಹೇಳುವುದು ಸರಿ ಅಲ್ಲ. ಈ ಯೋಜನೆ 10-12 ವರ್ಷದ ಹಿಂದೆ ಆಗಿದ್ದು ಎಂದು ವಿಶ್ವನಾಥ್ ವಿವರಿಸಿದರು.
ಸುಳ್ಳು ಎಷ್ಟು ದಿನ ಅಂತಾ ಹೇಳುತ್ತೀರಾ? ಸುಳ್ಳು ಹೇಳಬಾರದು. ಇದು ನಾನು ಧೃವನಾರಾಯಣ್ ಮತ್ತು ಮಾಜಿ ಸಂಸದೆ ರಮ್ಯಾ ಸಂಸದರಾಗಿದ್ದಾಗ ಆಗಿದ್ದಾಗ ಆರಂಭವಾದ ಕೆಲಸ. ನೀವು ಹೊಸದಾಗಿ ತಂದಿದ್ದರೆ ಬೇಕಾದರೆ ಹೇಳಿ ಎಂದು ವಿಶ್ವನಾಥ್ ತಿರುಗೇಟು ನೀಡಿದರು.
ಉಂಡುವಾಡಿ ಕುಡಿಯುವ ನೀರು ಯೋಜನೆ ಕೂಡಾ ಜಿಟಿ ದೇವೇಗೌಡ ಸಾಧನೆ ಅಲ್ಲ. ಅದನ್ನು ನಾನು ಮಾಡಿದ್ದು. ನೀವು ಎಲ್ಲಿದ್ದೀರಿ ಮಿಸ್ಟರ್ ಜಿಟಿ ದೇವೇಗೌಡ? ಎಂದು ವಿಶ್ವನಾಥ್ ಪ್ರಶ್ನಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಕೊರೊನಾ ಏರಿಕೆ: 30,948 ಪಾಸಿಟಿವ್​; 403 ಬಲಿ