Webdunia - Bharat's app for daily news and videos

Install App

ನಿಜಾಮುದ್ದೀನ್ ಮಸೀದಿ ಮುಸ್ಲಿಂ ಗುರುಗಳಿಂದ ರಾಜ್ಯದಲ್ಲಿ ಪ್ರಚಾರ : ಲಾಕ್ ಡೌನ್ ಬಿಗಿ

Webdunia
ಶನಿವಾರ, 4 ಏಪ್ರಿಲ್ 2020 (19:29 IST)
ದಿಲ್ಲಿಯ ನಿಜಾಮುದ್ದಿನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ 10  ಮಂದಿ ಮುಸ್ಲಿಂ ಧರ್ಮ ಗುರುಗಳು ರಾಜ್ಯದಲ್ಲಿ ಧರ್ಮ ಪ್ರಚಾರ, ಉಪನ್ಯಾಸ ಮಾಡಿದ್ದಾರೆ.

 ಮಂಡ್ಯ ಜಿಲ್ಲೆಯ ನಾಗಮಂಗಲ ಹಾಗೂ ಮಳವಳ್ಳಿಯಲ್ಲಿ ಸಂಚರಿಸಿ ಧಾರ್ಮಿಕ ಉಪನ್ಯಾಸ ನೀಡಿರುವ ಹಿನ್ನೆಲೆಯಲ್ಲಿ ಈ ತಾಲೂಕುಗಳಲ್ಲಿ ಲಾಕ್ ಡೌನ್ ಅನ್ನು ತೀವ್ರ ಗೊಳಿಸಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್  ಹೇಳಿದ್ದಾರೆ.

ಒಟ್ಟು 10 ಮಂದಿ ಮುಸ್ಲಿಂ ಧರ್ಮ ಗುರುಗಳು ದಿಲ್ಲಿಯ ವಿವಿಧ ಭಾಗಗಳಿಗೆ ಸೇರಿದವರಾಗಿದ್ದು, ನಿಜಾಮುದ್ದೀನ ಸಭೆ ಮುಗಿಸಿಕೊಂಡು ಜ.27 ರಂದು ದಿಲ್ಲಿಯಿಂದ ಹೊರಟು 29 ರಂದು ಮೈಸೂರು ತಲುಪಿರುತ್ತಾರೆ. ಅಲ್ಲಿ 40 ಮಸೀದಿಗಳಲ್ಲಿ ಪ್ರಚಾರ ನಡೆಸಿ ಬಳಿಕ ಮಾ.13 ರಂದು ಮೈಸೂರಿಂದ ನಾಗಮಂಗಲಕ್ಕೆ ಬಂದು ಮಸೀದಿಯೊಂದರಲ್ಲಿ ಮಾ.23 ರವರೆಗೆ ವಾಸ್ತವ್ಯ ಹೂಡಿರುತ್ತಾರೆ. ಮಾ.23 ನಾಗಮಂಗಲದಿಂದ ಮಳವಳ್ಳಿ ಗೆ ಟ್ಯಾಕ್ಸಿ ಯಲ್ಲಿ ಬಂದು ದರ್ಗಾ ಒಂದರಲ್ಲಿ ನೆಲೆಸಿರುತ್ತಾರೆ.

ಅಲ್ಲಿಂದ 29 ರಂದು ಬನ್ನೂರು ಮಾರ್ಗ ಮೈಸೂರಿಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಚೆಕ್ ಪೋಸ್ಟ್ ಪರಿಶೀಲನೆ ನಡೆಸಿದಾಗ ಇವರ ಚಲನ ವಲನ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದರಿಂದ ಇವರನ್ನು ಮೈಸೂರು ಜಿಲ್ಲಾಡಳಿತ ಹೋಂಕೊರಂಟೈನ್ ನಲ್ಲಿ ಇರಿಸಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಈ ಹಿನ್ನೆಲೆಯಲ್ಲಿ ಫೆ.5 ರಂದು ದಿಲ್ಲಿಗೆ ಹೋಗಿಬಂದಿದ್ದ ಮಳವಳ್ಳಿಯ 7 ಮಂದಿ ಸೇರಿದಂತೆ ಅವರ ಕುಟುಂಬದ 25 ಮಂದಿ ಹಾಗೂ ನಾಗಮಂಗಲದ 24 ಐಸೊಲೇಷನ್ ವಾರ್ಡ್ ನಲ್ಲಿ ಇರಿಸಲಾಗಿದೆ ಎಂದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ದಾಖಲೆ ಬರೆದ ಪರಿಶುದ್ಧ ಚಿನ್ನದ ಬೆಲೆ

ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಕಾಂಗ್ರೆಸ್ ಕೆಲಸ: ಬಿವೈ ವಿಜಯೇಂದ್ರ

ಇಸ್ರೇಲ್, ಇರಾನ್ ಯುದ್ಧ ಆದ್ರೆ ಟೆನ್ಷನ್ ಪಾಕಿಸ್ತಾನಕ್ಕೆ: ಯಾಕೆ ಗೊತ್ತಾ

ಅಹಮದಾಬಾದ್ ವಿಮಾನ ಪತನ: ಸಾವಿನ ಸಂಖ್ಯೆ 274 ಕ್ಕೆ ಏರಿಕೆ

ವಿಮಾನದಲ್ಲಿ ಯಾವಾಗಲೂ ಎಲ್ಲಿ ಕೂತರೆ ಸೇಫ್ ಇಲ್ಲಿದೆ ನೋಡಿ ವಿವರ

ಮುಂದಿನ ಸುದ್ದಿ
Show comments