Select Your Language

Notifications

webdunia
webdunia
webdunia
webdunia

ನಾಗಮಂಗಲ ಗಲಭೆ, ಬಂಧನ ಭೀತಿಯಲ್ಲಿದ್ದ ಯುವಕ ಸಾವು

ನಾಗಮಂಗಲ ಗಲಭೆ, ಬಂಧನ ಭೀತಿಯಲ್ಲಿದ್ದ ಯುವಕ ಸಾವು

Sampriya

ನಾಗಮಂಗಲ , ಶನಿವಾರ, 21 ಸೆಪ್ಟಂಬರ್ 2024 (22:29 IST)
ನಾಗಮಂಗಲ: ಇಲ್ಲಿ ನಡೆದ ಗಲಭೆ ಸಂಬಂಧ ಬಂಧನ ಭೀತಿಯಲ್ಲಿದ್ದ ಯುವಕ ಕಿರಣ್ ಮಿದುಳಿಗೆ ಪಾರ್ಶ್ವವಾಯು ಹೊಡೆದು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.

ಗಲಭೆ ಬಳಿಕ ಕಳೆದ ವಾರ ಕಿರಣ್ ಊರು ತೊರೆದಿದ್ದು, ಯುವಕನ ತಂದೆ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದು, ಕಾರಾಗೃಹದಲ್ಲಿದ್ದಾರೆ.  ತಂದೆ ಬಂಧನ ಸಂಬಂಧ ಕಿರಣ್ ತುಂಬಾನೇ ಆತಂಕಕ್ಕೆ ಒಳಗಾಗಿದ್ದ ಎಂದು ಕುಟುಂಬಸ್ಥರು ದೂರಿದ್ದಾರೆ.

ಕಿರಣ್‌ನನ್ನು ಗುರುವಾರ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಶಸ್ತ್ರಚಿಕಿತ್ಸೆ ಕೂಡ ನಡೆದಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದ ಕಿರಣ್‌ ಮೂರು ವರ್ಷಗಳ ಹಿಂದೆ ಯುವತಿಯೊಬ್ಬರನ್ನು ಪ್ರೀತಿಸಿ ವಿವಾಹವಾಗಿದ್ದ. ಕಿರಣ್‌ಗೆ ಎರಡು ವರ್ಷದ ಮಗು ಮತ್ತು ಪತ್ನಿ ಇದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುನಿರತ್ನ ಬಗ್ಗೆ ಯಾವುದೇ ಕರುಣೆಯಿಲ್ಲ: ಬಸನಗೌಡ ಪಾಟೀಲ್ ಆಕ್ರೋಶ