Webdunia - Bharat's app for daily news and videos

Install App

ಮೈಸೂರು ಪಾಕ್ ಹೆಸರು ಬದಲಾವಣೆಗೆ ಮೂಲ ಬಾಣಸಿಗನ ವಂಶಸ್ಥರ ವಿರೋಧ: ಅಷ್ಟಕ್ಕೂ ಅವರು ಯಾರು ನೋಡಿ

Krishnaveni K
ಸೋಮವಾರ, 26 ಮೇ 2025 (09:56 IST)
Photo Credit: X
ಮೈಸೂರು: ಭಾರತ ಮತ್ತು ಪಾಕಿಸ್ತಾನ ಕದನದ ಬಳಿಕ ರಾಜಸ್ಥಾನದ ಬೇಕರಿಯೊಂದರಲ್ಲಿ ಮೈಸೂರ್ ಪಾಕ್ ಸಿಹಿ ತಿಂಡಿಯ ಹೆಸರನ್ನು ಮೈಸೂರು ಶ್ರೀ ಎಂದು ಬದಲಾಯಿಸಲಾಗಿದೆ. ಆದರೆ ಇದಕ್ಕೀಗ ಮೂಲ ಬಾಣಸಿಗನ ವಂಶಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ರಾಜಸ್ಥಾನದ ಬೇಕರಿಯೊಂದರಲ್ಲಿ ಪಾಕಿಸ್ತಾನದ ಮೇಲೆ ಜನಾಕ್ರೋಶದ ಹಿನ್ನಲೆಯಲ್ಲಿ ಸಿಹಿ ತಿಂಡಿಯ ಹೆಸರನ್ನೇ ಶ್ರೀ ಎಂದು ಬದಲಾಯಿಸಲಾಗಿದೆ. ಈ ಸುದ್ದಿ ಭಾರೀ ವೈರಲ್ ಆಗಿತ್ತು. ಅಸಲಿಗೆ ಪಾಕ್ ಎನ್ನುವುದಕ್ಕೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲ. ಹಾಗಿದ್ದರೂ ಹೆಸರು ಬದಲಾವಣೆ ಮಾಡಿರುವುದಕ್ಕೆ ಮೂಲ ಬಾಣಸಿಗರಾದ ಕಾಕಾಸುರ ಮಾದಪ್ಪ ಅವರ ವಂಶಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಯಾರು ಈ ಕಾಕಾಸುರ ಮಾದಪ್ಪ?
ಈ ಹಿಂದೆ 19 ನೇ ಶತಮಾನದಲ್ಲಿ ಮೈಸೂರು ರಾಜರ ಆಸ್ಥಾನದಲ್ಲಿ ಅಡುಗೆ ಭಟ್ಟರಾಗಿದ್ದ ಕಾಕಾಸುರ ಮಾದಪ್ಪ ಮೈಸೂರ್ ಪಾಕ್ ಎನ್ನುವ ಸಿಹಿ ತಿಂಡಿಯನ್ನು ಸೃಷ್ಟಿ ಮಾಡಿದವರು. ಸಕ್ಕರೆ, ತುಪ್ಪ, ಕಡಲೆ ಹಿಟ್ಟು ಬಳಸಿ ಅವರು ಮಾಡಿದ ಸಿಹಿ ತಿನಿಸು ಭಾರೀ ಇಷ್ಟವಾಯಿತು. ಮೈಸೂರಿನಲ್ಲಿ ಮಾಡಿರುವ ಕಾರಣಕ್ಕೆ ಇದಕ್ಕೆ ಮೈಸೂರು ಪಾಕ್ ಎನ್ನುವ ಹೆಸರು ಬಂತು.

ಈಗ ಮೈಸೂರು ಪಾಕ್ ವಿಶ್ವಿವಿಖ್ಯಾತವಾದ ಸಿಹಿ ತಿನಿಸಾಗಿದೆ. ಆದರೆ ಇದರ ಹೆಸರು ಬದಲಾವಣೆ ಮಾಡಿರುವುದಕ್ಕೆ ಅವರ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಮೈಸೂರು ಪಾಕ್ ಎನ್ನುವ ಹೆಸರು ಈಗ ಪ್ರಖ್ಯಾತಿ ಪಡೆದಿದೆ. ಇದರಲ್ಲಿರುವ ಪಾಕ್ ಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಇದರ ಹೆಸರು ಬದಲಾವಣೆ ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆಶಿಗೆ ಕ್ಯಾರೇ ಎನ್ನದ ಸಿದ್ದು, ಭುಗಿಲೆದ್ದ ಕಾಂಗ್ರೆಸ್ ಅಂತಃಕಲಹ, ಸೆಪ್ಟೆಂಬರ್‌ನಲ್ಲಿ ಮುಹೂರ್ತ ಫಿಕ್ಸ್: ಬಿಜೆಪಿ

ರಾಜ್ಯದ ಸಣ್ಣ ವ್ಯಾಪಾರಸ್ಥರ ಹಿತರಕ್ಷಣೆಗೆ ಬಿಜೆಪಿ ಸಹಾಯವಾಣಿ - ಛಲವಾದಿ ನಾರಾಯಣಸ್ವಾಮಿ

ಡಿಕೆಶಿ ಕುರ್ಚಿ ಕಸಿದುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದರೆ ಮನೆಯಲ್ಲಿ ಕೂರಿಸುವ ಎಚ್ಚರಿಕೆ ಕೊಟ್ರಾ ಸಿದ್ದರಾಮಯ್ಯ: ಆರ್ ಅಶೋಕ್‌

ಆರ್‌ಸಿಬಿ ಕಾಲ್ತುಳಿತ ಪ್ರಕರಣ, ಅಮಾಯಕರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಲ್ಲ: ಆರ್‌ ಅಶೋಕ್‌

ತುರ್ತು ನಿರ್ವಹಣಾ ಕಾಮಗಾರಿ: ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್ ವ್ಯತ್ಯಯ

ಮುಂದಿನ ಸುದ್ದಿ
Show comments