Select Your Language

Notifications

webdunia
webdunia
webdunia
webdunia

ಮೈಸೂರು ಯದುವಂಶಕ್ಕೆ ಮತ್ತೊಬ್ಬ ಕುಡಿ: ಉಬ್ಬು ಹೊಟ್ಟೆ ಮರೆಮಾಚಿಕೊಂಡ ಯದುವೀರ್ ಪತ್ನಿ

Mysore king family

Krishnaveni K

ಮೈಸೂರು , ಶುಕ್ರವಾರ, 4 ಅಕ್ಟೋಬರ್ 2024 (17:40 IST)
ಮೈಸೂರು: ದಸರಾ ಉತ್ಸವದ ನಿಮಿತ್ತ ಮೈಸೂರು ಅರಮನೆಯಲ್ಲಿ ಮಹಾರಾಜ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ನಡೆಯುತ್ತಿದೆ. ಈ ವೇಳೆ ಎಲ್ಲರ ಕಣ್ಣು ರಾಣಿ ತ್ರಿಶಿಕಾ ಕುಮಾರಿ ಮೇಲೆ ಬಿದ್ದಿದೆ.

ಯದುವೀರ್ ಒಡೆಯರ್ ಮತ್ತು ರಾಣಿ ತ್ರಿಶಿಕಾಗೆ ಈಗಾಗಲೇ ಓರ್ವ ಪುತ್ರನಿದ್ದಾನೆ. ಇದೀಗ ರಾಜ ದಂಪತಿ ಮತ್ತೊಬ್ಬ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ. ಖಾಸಗಿ ದರ್ಬಾರ್ ವೇಳೆ ತ್ರಿಶಿಕಾ ತಮ್ಮ ಉಬ್ಬು ಹೊಟ್ಟೆಯನ್ನು ಮುಚ್ಚಿಕೊಳ್ಳಲು ಪ್ರಯತ್ನ ಪಟ್ಟಿದ್ದು ಎಲ್ಲರ ಗಮನಕ್ಕೆ ಬಂದಿದೆ.

ಇದುವರೆಗೆ ಅಧಿಕೃತ ಪ್ರಕಟಣೆ ಬಂದಿಲ್ಲ. ಆದರೆ ತ್ರಿಶಿಕಾ ಉಬ್ಬು ಹೊಟ್ಟೆ ನೋಡಿದರೆ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವುದು ಪಕ್ಕಾ ಆಗಿದೆ. ಹೀಗಾಗಿ ಈ ಬಾರಿ ದಸರಾ ವೇಳೆ ರಾಜ ಮನೆತನ ಮತ್ತೊಂದು ಮಗುವಿನ ನಿರೀಕ್ಷೆಯ ಸಂಭ್ರಮದಲ್ಲಿದೆ ಎನ್ನಬಹುದು. ಈ ವಿಚಾರವನ್ನು ಅರಮನೆ ಮೂಲದಿಂದ ಖಚಿತಪಡಿಸಬೇಕಿದೆಯಷ್ಟೇ.

ಮೈಸೂರು ರಾಜರ ಮನೆತನಕ್ಕೆ ಅಲಮೇಲಮ್ಮನ ಶಾಪದಿಂದಾಗಿ ಮಕ್ಕಳಾಗದ ಕೊರಗಿತ್ತು. ಈ ಮೊದಲು ಶ್ರೀಕಂಠದತ್ತ ಒಡೆಯರ್ ಅವರಿಗೆ ಮಕ್ಕಳಾಗದ ಕಾರಣಕ್ಕೆ ಯದುವೀರ್ ಅವರನ್ನು ದತ್ತು ಪಡೆಯಲಾಯಿತು. ಯದುವೀರ್ ಪುತ್ರನಾಗಿ ಆದ್ಯವೀರ ಜನಿಸಿದ್ದ. ಈಗ ಮತ್ತೊಂದು ಮಗುವೂ ಬರುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು: ಮೂರು ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇಮೇಲ್, ಇಲ್ಲಿದೆ ವಿವರ