Select Your Language

Notifications

webdunia
webdunia
webdunia
webdunia

ರಾಜಿ ಸಂಧಾನಕ್ಕೆ ಹೋಗಿದ್ದ ವ್ಯಕ್ತಿಯ ಕೊಲೆ

ರಾಜಿ ಸಂಧಾನಕ್ಕೆ ಹೋಗಿದ್ದ ವ್ಯಕ್ತಿಯ ಕೊಲೆ
bangalore , ಮಂಗಳವಾರ, 29 ನವೆಂಬರ್ 2022 (13:49 IST)
ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಆತನ ಸಂಬಂಧಿಕರು ಹಲ್ಲೆ ನಡೆಸಿ ಕೊಂದಿರುವ ಘಟನೆ ಜೆ.ಜೆ.ನಗರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಜೆ.ಜೆ.ನಗರದ ನಿವಾಸಿ ಇಮಾಯೂನ್‌ ಮೃತ ದುರ್ದೈವಿ.  ಮೃತನ ಸಂಬಂಧಿಕರಾದ ಸೈಯದ್‌ ಫೈಸಲ್‌ ಹಾಗೂ ಸೈಯದ್‌ ಅಸ್ಮತ್‌ರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ಜಾವೀದ್‌ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಈ ಹಿನ್ನಲೆಯಲ್ಲಿ ದಂಪತಿ ಮಧ್ಯೆ ರಾಜಿ ಸಂಧಾನ ಸಲುವಾಗಿ ಜಾವೀದ್‌ಗೆ ಮನೆಗೆ ಆತನ ಪತ್ನಿ ಮುಸ್ಕಾನ್‌ ಸೋದರರು ಬಂದಿದ್ದರು. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಇಮಾಯೂನ್‌ ಮೇಲೆ ಸೈಯದ್‌ ಫೈಸಲ್‌ ಹಲ್ಲೆ ನಡೆಸಿದ್ದಾನೆ. ಎದೆಗೆ ಗಂಭೀರ ಪೆಟ್ಟಾಗಿ ಆತ ಕುಸಿದು ಬಿದ್ದಿದ್ದಾನೆ. ಕೂಡಲೇ ಇಮಾಯೂನ್‌ನನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಮಾರ್ಗ ಮಧ್ಯೆ ಆತ ಕೊನೆಯುಸಿರೆಳೆದಿದ್ದಾನೆ. ಜೆ.ಜೆ.ನಗರ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ..

Share this Story:

Follow Webdunia kannada

ಮುಂದಿನ ಸುದ್ದಿ

ಮುಕುಲ್ ರೋಹಟಾಗಿ ಸೀನಿಯರ್ ಅಡ್ವೋಕೇಟ್ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ