Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ-ಈಶ್ವರಪ್ಪ ಬಣಕ್ಕೆ ಮುರಳೀಧರ್ ರಾವ್ ಶಾಕ್

ಯಡಿಯೂರಪ್ಪ-ಈಶ್ವರಪ್ಪ ಬಣಕ್ಕೆ ಮುರಳೀಧರ್ ರಾವ್ ಶಾಕ್
ಬೆಂಗಳೂರು , ಭಾನುವಾರ, 30 ಏಪ್ರಿಲ್ 2017 (12:49 IST)
ಚುನಾವಣಾ ವರ್ಷದಲ್ಲಿ ಪಕ್ಷ ಸಂಘಟನೆಗಿಂತ ಹೆಚ್ಚು ಕಿತ್ತಾಡುವುದರಲ್ಲೇ ಕಾಲ ಕಳೆಯುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ  ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ರಾತ್ರೋರಾತ್ರಿ ಶಾಕ್ ಕೊಟ್ಟಿದ್ದಾರೆ. ಎರಡೂ ಬಣಗಳಿಂದ ತಲಾ ಇಬ್ಬರನ್ನ ಕಿತ್ತೊಗೆದು ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ.
 

ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಈಶ್ವರಪ್ಪ ಬಣದ ಎಂ.ಬಿ. ಭಾನುಪ್ರಕಾಶ್ ಮತ್ತು ನಿರ್ಮಲ್ ಕುಮಾರ್ ಸುರಾನಾ, ಯಡಿಯೂರಪ್ಪ ಬಣದ ರೈತ ಮೋರ್ಚಾ ಎಂ.ಪಿ. ರೇಣುಕಾಚಾರ್ಯ ಮತ್ತು ರಾಜ್ಯದ ವಕ್ತಾರ ಗೋ. ಮಧುಸೂದನ್ ಅವರನ್ನ ಕೈಬಿಡಲಾಗಿದ್ದು, ಉಭಯ ಬಣಗಳಿಗೂ ಖಡಕ್ ಸಂದೇಶ ರವಾನಿಸಲಾಗಿದೆ.

ಈ ಮಧ್ಯೆ, ಬಿಜೆಪಿ ಕೆಲ ತಟಸ್ಥ ನಾಯಕರ ಬಳಿ ಭಿನ್ನಮತ ಕುರಿತಂತೆ ಮಾಹಿತಿ ಪಡೆದಿರುವ ಮುರಳೀಧರ್ ರಾವ್ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ





Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಲ್ಲಿ ಹಾಡಹಗಲೇ 3 ವರ್ಷದ ಮಗು ಕಿಡ್ನ್ಯಾಪ್