Publish Date: Wed, 11 Dec 2019 (18:39 IST)
Updated Date: Wed, 11 Dec 2019 (18:41 IST)
ಬೈ ಎಲೆಕ್ಷನ್ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿರೋ ಬೆನ್ನಲ್ಲೇ ಕೈ ಪಾಳೆಯದಲ್ಲಿ ಆಂತರಿಕ ಮೆಗಾ ಫೈಟ್ ಶುರುವಾಗಿದೆ.
ಟ್ರಬಲ್ ಶೂಟರ್ ಗೆ ಹೈಕಮಾಂಡ್ ಬುಲಾವ್ ಹೇಳಿರೋದು ಪಕ್ಷದ ಮುಖಂಡರಲ್ಲೇ ಅಸಮಾಧಾನಕ್ಕೆ ಕಾರಣವಾಗುತ್ತಿದೆ.
ಮಾಜಿ ಸಂಸದ ವಿ.ಮುನಿಯಪ್ಪ ಅವರೂ ಮೂಲ ಕಾಂಗ್ರೆಸ್ ನ ಬಣದಿಂದ ಕೆಪಿಸಿಸಿ ಅಧ್ಯಕ್ಷರಾಗೋಕೆ ತಯಾರಿ ತೀವ್ರಗೊಳಿಸಿದ್ದಾರೆ.
ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಡಿಕೆಶಿಯನ್ನು ಕೂಡಿಸುತ್ತಾ ಅಥವಾ ಮುನಿಯಪ್ಪ, ಖರ್ಗೆ ಪರ ಒಲವು ತೋರಿಸುತ್ತಾ ಅನ್ನೋದು ಸದ್ಯದ ಕುತೂಹಲ ಕಾಂಗ್ರೆಸ್ ನಲ್ಲಿದೆ.