Select Your Language

Notifications

webdunia
webdunia
webdunia
webdunia

ಆರ್ ಅಶೋಕ್ ಗೇ ಎಚ್ಐವಿ ಇಂಜೆಕ್ಷನ್: ಬಿಜೆಪಿಯಲ್ಲಿನ್ನು ಮುನಿರತ್ನ ಖೇಲ್ ಖತಂ

Munirathna-R Ashok

Krishnaveni K

ಬೆಂಗಳೂರು , ಶುಕ್ರವಾರ, 20 ಸೆಪ್ಟಂಬರ್ 2024 (15:56 IST)
Photo Credit: Facebook
ಬೆಂಗಳೂರು: ಎಚ್ಐವಿ ಸೋಂಕಿತರ ಜೊತೆ ಲೈಂಗಿಕ ಕ್ರಿಯೆ ನಡೆಸಿ ಹನಿಟ್ರ್ಯಾಪ್ ಮಾಡುತ್ತಿದ್ದ ಆರೋಪಕ್ಕೊಳಗಾಗಿರುವ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಆರ್ ಅಶೋಕ್ ಗೇ ಎಚ್ಐವಿ ಇಂಜೆಕ್ಟ್ ಮಾಡಲು ಹೊರಟಿದ್ದರಾ? ಹೀಗೊಂದು ಶಾಕಿಂಗ್ ನ್ಯೂಸ್ ಬಂದಿದೆ.

ಆರ್ ಅಶೋಕ್ ಬಿಜೆಪಿಯ ಪ್ರಮುಖ ನಾಯಕ, ಪ್ರಸಕ್ತ ವಿಪಕ್ಷ ನಾಯಕನೂ ಹೌದು. ಆದರೆ ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದು ಶಾಸಕರಾಗಿರುವ ಮುನಿರತ್ನ ಬಿಜೆಪಿಯಲ್ಲಿ ಈಗ ಪ್ರಬಲ ನಾಯಕರಾಗಿ ಬೆಳೆಯುತ್ತಿದ್ದರು. ಹೀಗಾಗಿ ಅಶೋಕ್ ರನ್ನು ಹಣಿಯಲು ಎಚ್ಐವಿ ಇಂಜೆಕ್ಷನ್ ರೆಡಿ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ.

ಮುನಿರತ್ನ ಎಚ್ಐವಿ ಇಂಜೆಕ್ಟ್ ಮಾಡಿ ಹನಿಟ್ರ್ಯಾಪ್ ಮಾಡುತ್ತಿದ್ದರು ಎಂದು ಆರೋಪಗಳು ಕೇಳಿಬಂದ ಬೆನ್ನಲ್ಲೇ ಬಿಜೆಪಿ ನಾಯಕರು ಅಲರ್ಟ್ ಆಗಿದ್ದಾರೆ. ಇದು ಸಾಬೀತಾದರೆ ಪಕ್ಷಕ್ಕೆ ಭಾರೀ ಡ್ಯಾಮೇಜ್ ಆಗಲಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಮುನಿರತ್ನ ಪ್ರಕರಣ ಇಟ್ಟುಕೊಂಡು ಬಿಜೆಪಿ ಕಾಲೆಳೆಯುತ್ತಿದ್ದಾರೆ.

ಹೀಗಾಗಿ ಮುನಿರತ್ನರನ್ನು ಪಕ್ಷದಿಂದಲೇ ಉಚ್ಛಾಟಿಸಲು ತಯಾರಿ ನಡೆದಿದೆ ಎನ್ನಲಾಗಿದೆ. ಮುನಿರತ್ನರನ್ನು ಪಕ್ಷದಿಂದ ಉಚ್ಛಾಟಿಸುವ ಮೂಲಕ ಪಕ್ಷಕ್ಕೆ ಕಳಂಕ ಬಾರದಂತೆ ನೋಡಿಕೊಳ್ಳಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಈಗಾಗಲೇ ಆರ್ ಅಶೋಕ್ ಕೂಡಾ ಮುನಿರತ್ನಗೆ ನಮ್ಮ ಬೆಂಬಲವಿಲ್ಲ ಎಂದಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಮುನಿರತ್ನ ಖೇಲ್ ಶೀಘ್ರದಲ್ಲೇ ಖತಂ ಆಗುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಮುಗಲಭೆ ಕಾಂಗ್ರೆಸ್‌ ಸರ್ಕಾರದ 6ನೇ ಗ್ಯಾರಂಟಿ: ಆರ್‌ ಅಶೋಕ್