Webdunia - Bharat's app for daily news and videos

Install App

ಆಂಧ್ರದ ರೌಡಿಗೆ ಬೆಂಗಳೂರಿನಲ್ಲಿ ಮುಹೂರ್ತ..!

Webdunia
ಗುರುವಾರ, 8 ಡಿಸೆಂಬರ್ 2022 (21:48 IST)
ಅವನೊಬ್ಬ ರೌಡಿಶೀಟರ್. ಆಂಧ್ರಪ್ರದೇಶದಲ್ಲಿ ಎರಡು ಕೊಲೆಯನ್ನು ಮಾಡಿದ್ದ ಆಸಾಮಿ. ಆಂಧ್ರ ಬಿಟ್ಟು ಸಿಲಿಕಾನ್ ಸಿಯಲ್ಲಿ ಮನೆ ಕಟ್ಟಿ ನೆಮ್ಮದಿ ಬದುಕು ಕಟ್ಟಿಕೊಳ್ಳಲು ಬಂದಿದ್ದ.ಆದರೆ ರೌಡಿಸಂನ ಟಾರ್ಗೇಟ್ ಆತನ ಮೇಲಿತ್ತು. ಆಂಧ್ರಗ್ಯಾಂಗ್ ರೌಡಿಶೀಟರ್ ನ ಮೇಲೆ‌ ಗುಂಡಿನ ದಾಳಿ ಮಾಡಿದೆ. ಅದೃಷ್ಟವಶಾತ್ ರೌಡಿಶೀಟರ್ ಪಾರಾಗಿದ್ದಾನೆ.
 
ಈ ಫೋಟೋದಲ್ಲಿರೋ ವ್ಯಕ್ತಿಯ ಹೆಸರು ಶಿವಶಂಕರ ರೆಡ್ಡಿ. ಆಂಧ್ರಪ್ರದೇಶದ ಮದನಪಲ್ಲಿ ಪೊಲೀಸ್ ಠಾಣೆಯ ರೌಡಿ ಶೀಟರ್.ಎರಡು ಕೊಲೆ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಆಸಾಮಿ.ಈತನ ಜೊತೆ ಅಶೋಕ್ ರೆಡ್ಡಿ ಎಂಬ ಚಾಲಕ ಸಹ ಇದ್ದ. ಈ ವೇಳೆ ಆಂಧ್ರಪ್ರದೇಶದಿಂದ ಬಂದಿದ್ದ ಗ್ಯಾಂಗ್ ಏಕಾಏಕಿ ಇಬ್ಬರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ.
 
ಹೌದು ಈ ದೃಶ್ಯ ನೋಡಿದ್ರೆ ಗೊತ್ತಾಗುತ್ತೆ ಎಷ್ಟು ಗುಂಡು ಫೈರ್ ಆಗಿತ್ತು ಅಂತ.ರಿವಲ್ವರ್ ನಲ್ಲಿದ್ದ 6 ಗುಂಡುಗಳು ಗುರುಹುಗಳು ನೆಲದ ಮೇಲೆ ಬಿದ್ದಿದ್ದವು.ಪೊಲೀಸರು ವೃತ್ತವನ್ನು ಹಾಕಿ ಸಾಕ್ಷ್ಯವನ್ನು ಸಂಗ್ರಹ ಮಾಡುತ್ತಿದ್ದರು. ಕೆಆರ್ ಪುರ ಸಮೀಪದ ಕುರುಡು ಸೊನ್ನೇನಹಳ್ಳಿಯ ಹ್ಯಾಪಿ ಗಾರ್ಡನ್ ನಲ್ಲಿ ಘಟನೆ ನಡೆದಿದ್ದು. ಮಟ ಮಟ ಮಧ್ಯಾಹ್ನ ಗುಂಡಿನ ಶಬ್ದ ಕೇಳಿ ಜನ‌ಬೆಚ್ಚಿಬೀಳುವಂತೆ ಮಾಡಿದೆ.
 
ರೌಡಿಶೀಟರ್ ಶಿವಶಂಕರ ರೆಡ್ಡಿ ಕೆಆರ್ ಪುರದ ಬಳಿ 60x40ರ ನಿವೇಶನದಲ್ಲಿ ಫ್ಲಾಟ್ ನಿರ್ಮಾಣ ಕಾರ್ಯ ಶುರುಮಾಡಿದ್ದ.. ಇದೇ ವೇಳೆ ಆಂಧ್ರ ಗ್ಯಾಂಗ್ ಬೆಂಗಳೂರಿನಲ್ಲೇ ಶಿವಶಂಕರ ರೆಡ್ಡಿರ ಕಥೆ ಮುಗಿಸಲು ಸನ್ನದ್ಧರಾಗಿ ಬಂದಿದ್ದಾರೆ. ಗುಂಡಿನ ದಾಳಿಯಲ್ಲಿ ಶಿವಶಂಕರ ರೆಡ್ಡಿ ಮತ್ತು ಚಾಲಕ ಅಶೋಕ್ ರೆಡ್ಡಿ ಗಾಯಗೊಂಡಿದ್ದರು ಪ್ರಾಣಪಾಯದಿಂದ ಪಾರಾಗಿದ್ದಾರೆ.
 
 ಸದ್ಯ ಕೆಆರ್ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಎರಡು ತಂಡವನ್ನು ರಚನೆ ಮಾಡಲಾಗಿದೆ. ಅದೇನಾದ್ರು ಆಂಧ್ರದ ರೌಡಿಗಳ ಬಡಿದಾಟ ಬೆಂಗಳೂರಿಗೆ ಬಂದಿರುವುದಕ್ಕೆ ತಕ್ಕಪಾಠವನ್ನು ಬೆಂಗಳೂರು ಪೊಲೀಸರು ಕಲಿಸಬೇಕಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments