Webdunia - Bharat's app for daily news and videos

Install App

ಆಂಧ್ರದ ರೌಡಿಗೆ ಬೆಂಗಳೂರಿನಲ್ಲಿ ಮುಹೂರ್ತ..!

Webdunia
ಗುರುವಾರ, 8 ಡಿಸೆಂಬರ್ 2022 (21:48 IST)
ಅವನೊಬ್ಬ ರೌಡಿಶೀಟರ್. ಆಂಧ್ರಪ್ರದೇಶದಲ್ಲಿ ಎರಡು ಕೊಲೆಯನ್ನು ಮಾಡಿದ್ದ ಆಸಾಮಿ. ಆಂಧ್ರ ಬಿಟ್ಟು ಸಿಲಿಕಾನ್ ಸಿಯಲ್ಲಿ ಮನೆ ಕಟ್ಟಿ ನೆಮ್ಮದಿ ಬದುಕು ಕಟ್ಟಿಕೊಳ್ಳಲು ಬಂದಿದ್ದ.ಆದರೆ ರೌಡಿಸಂನ ಟಾರ್ಗೇಟ್ ಆತನ ಮೇಲಿತ್ತು. ಆಂಧ್ರಗ್ಯಾಂಗ್ ರೌಡಿಶೀಟರ್ ನ ಮೇಲೆ‌ ಗುಂಡಿನ ದಾಳಿ ಮಾಡಿದೆ. ಅದೃಷ್ಟವಶಾತ್ ರೌಡಿಶೀಟರ್ ಪಾರಾಗಿದ್ದಾನೆ.
 
ಈ ಫೋಟೋದಲ್ಲಿರೋ ವ್ಯಕ್ತಿಯ ಹೆಸರು ಶಿವಶಂಕರ ರೆಡ್ಡಿ. ಆಂಧ್ರಪ್ರದೇಶದ ಮದನಪಲ್ಲಿ ಪೊಲೀಸ್ ಠಾಣೆಯ ರೌಡಿ ಶೀಟರ್.ಎರಡು ಕೊಲೆ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಆಸಾಮಿ.ಈತನ ಜೊತೆ ಅಶೋಕ್ ರೆಡ್ಡಿ ಎಂಬ ಚಾಲಕ ಸಹ ಇದ್ದ. ಈ ವೇಳೆ ಆಂಧ್ರಪ್ರದೇಶದಿಂದ ಬಂದಿದ್ದ ಗ್ಯಾಂಗ್ ಏಕಾಏಕಿ ಇಬ್ಬರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ.
 
ಹೌದು ಈ ದೃಶ್ಯ ನೋಡಿದ್ರೆ ಗೊತ್ತಾಗುತ್ತೆ ಎಷ್ಟು ಗುಂಡು ಫೈರ್ ಆಗಿತ್ತು ಅಂತ.ರಿವಲ್ವರ್ ನಲ್ಲಿದ್ದ 6 ಗುಂಡುಗಳು ಗುರುಹುಗಳು ನೆಲದ ಮೇಲೆ ಬಿದ್ದಿದ್ದವು.ಪೊಲೀಸರು ವೃತ್ತವನ್ನು ಹಾಕಿ ಸಾಕ್ಷ್ಯವನ್ನು ಸಂಗ್ರಹ ಮಾಡುತ್ತಿದ್ದರು. ಕೆಆರ್ ಪುರ ಸಮೀಪದ ಕುರುಡು ಸೊನ್ನೇನಹಳ್ಳಿಯ ಹ್ಯಾಪಿ ಗಾರ್ಡನ್ ನಲ್ಲಿ ಘಟನೆ ನಡೆದಿದ್ದು. ಮಟ ಮಟ ಮಧ್ಯಾಹ್ನ ಗುಂಡಿನ ಶಬ್ದ ಕೇಳಿ ಜನ‌ಬೆಚ್ಚಿಬೀಳುವಂತೆ ಮಾಡಿದೆ.
 
ರೌಡಿಶೀಟರ್ ಶಿವಶಂಕರ ರೆಡ್ಡಿ ಕೆಆರ್ ಪುರದ ಬಳಿ 60x40ರ ನಿವೇಶನದಲ್ಲಿ ಫ್ಲಾಟ್ ನಿರ್ಮಾಣ ಕಾರ್ಯ ಶುರುಮಾಡಿದ್ದ.. ಇದೇ ವೇಳೆ ಆಂಧ್ರ ಗ್ಯಾಂಗ್ ಬೆಂಗಳೂರಿನಲ್ಲೇ ಶಿವಶಂಕರ ರೆಡ್ಡಿರ ಕಥೆ ಮುಗಿಸಲು ಸನ್ನದ್ಧರಾಗಿ ಬಂದಿದ್ದಾರೆ. ಗುಂಡಿನ ದಾಳಿಯಲ್ಲಿ ಶಿವಶಂಕರ ರೆಡ್ಡಿ ಮತ್ತು ಚಾಲಕ ಅಶೋಕ್ ರೆಡ್ಡಿ ಗಾಯಗೊಂಡಿದ್ದರು ಪ್ರಾಣಪಾಯದಿಂದ ಪಾರಾಗಿದ್ದಾರೆ.
 
 ಸದ್ಯ ಕೆಆರ್ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಎರಡು ತಂಡವನ್ನು ರಚನೆ ಮಾಡಲಾಗಿದೆ. ಅದೇನಾದ್ರು ಆಂಧ್ರದ ರೌಡಿಗಳ ಬಡಿದಾಟ ಬೆಂಗಳೂರಿಗೆ ಬಂದಿರುವುದಕ್ಕೆ ತಕ್ಕಪಾಠವನ್ನು ಬೆಂಗಳೂರು ಪೊಲೀಸರು ಕಲಿಸಬೇಕಿದೆ.
 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments