Publish Date: Thu, 07 Dec 2023 (20:00 IST)
Updated Date: Thu, 07 Dec 2023 (20:43 IST)
ತುಮಕೂರು ಜಿಲ್ಲೆಯಲ್ಲಿ ಮುಂದುವರಿದ ಮೌಢ್ಯಾಚರಣೆ ಬಾಣಂತಿ- ಮಗು ಮತ್ತು ಋತುಮತಿಯಾದ ಮಹಿಳೆಯರನ್ನು ಊರ ಹೊರಗಿನ ಗುಡಿಸಲಿನಲ್ಲಿಟ್ಟಿರುವ ಘಟನೆ ತುರುವೇಕೆರೆ ತಾಲೂಕಿನ ಮಾಯಸಂದ್ರದ ವರಹಸಂದ್ರ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಬಾಣಂತಿ ಚೈತ್ರಾ ಮಗು ಹಾಗೂ ಋತುಮತಿಯರಾದ ಶಾರದಮ್ಮ, ಪಾರ್ವತಮ್ಮರನ್ನು ಊರ ಹೊರಗಿಟ್ಟ ಅಮಾನುಷ ಕೃತ್ಯ ಬೆಳಕೆಗೆ ಬಂದಿದ್ದು ಸ್ಥಳಕ್ಕೆ ತಹಶೀಲ್ದಾರ್ ರೇಣುಕುಮಾರ್ಭೇಟಿ ನೀಡಿ ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿದ್ದಾರೆ.