Webdunia - Bharat's app for daily news and videos

Install App

ಪುತ್ರಿ, ಅಳಿಯನಿಗೆ ಮುಡಾ ಸೈಟು ಕೊಡಿಸಿದ ಜಿಟಿ ದೇವೇಗೌಡ: ಶಾಸಕರಿಗೆ ಸಂಕಷ್ಟ

Krishnaveni K
ಶನಿವಾರ, 11 ಜನವರಿ 2025 (09:35 IST)
ಮೈಸೂರು: ಸಿಎಂ ಸಿದ್ದರಾಮಯ್ಯ ಬಳಿಕ ಈಗ ಮುಡಾ ಹಗರಣ ಸಂಕಷ್ಟ ಶಾಸಕ ಜಿಟಿ ದೇವೇಗೌಡರಿಗೂ ತಟ್ಟಿದೆ. ತಮ್ಮ ಪ್ರಭಾವ ಬಳಸಿ ಪುತ್ರಿ, ಅಳಿಯನಿಗೆ ಸೈಟು ಕೊಡಿಸಿದ ಆರೋಪಕ್ಕೊಳಗಾಗಿದ್ದಾರೆ.

ಈ ಬಗ್ಗೆ ಸಿಎಂ ಪ್ರಕರಣದಲ್ಲಿ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಚಾಮುಂಡಿಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಜಿಟಿ ದೇವೇಗೌಡ ತಮ್ಮ ಪ್ರಭಾವ ಬಳಸಿ ಮಗಳು, ಅಳಿಯನಿಗೆ ಮುಡಾ ಸೈಟು ಕೊಡಿಸಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಜಿಟಿ ದೇವೇಗೌಡ ಮೇಲಿನ ದೂರುಗಳೇನು?
ಸರ್ಕಾರಕ್ಕೆ ಸೇರಿದ ಮತ್ತು ಕರ್ನಾಟಕ ಹೈಕೋರ್ಟ್ ನಲ್ಲಿ ವಿಚಾರಣೆ ಬಾಕಿಯಿರುವ ಜಾಮೀನಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಕೆ ಚೌಡಯ್ಯ ಎಂಬವರಿಗೆ 50:50 ಅನುಪಾತದಲ್ಲಿ ಮುಡಾದಲ್ಲಿ ಆರು ನಿವೇಶನಗಳನ್ನು ಕೊಡಿಸಿದ್ದಾರೆ. ಇದರಲ್ಲಿ ಎರಡು ಸೈಟುಗಳನ್ನು ಮಗಳು ಅನ್ನಪೂರ್ಣೆ ಮತ್ತು ಅಳಿಯ ವಿಶ್ವೇಶ್ವರಯ್ಯನವರ ಹೆಸರಿಗೆ ಮಾಡಿಸಿದ್ದಾರೆ. ಮೈಸೂರು ತಾಲೂಕಿನ ಕಸಾಬಾ ಹೋಬಳಿ ದೇವನೂರು ಗ್ರಾಮದ ಸರ್ವೆ ನಂ. 154 ರ ಆರ್ ಟಿಸಿ ಪ್ರತಿಯಲ್ಲಿನ 9 ನೇ ಕಾಲಂನಲ್ಲಿ ಜವರಯ್ಯ ಕೆ ಬೋರಯ್ಯ ಚೌಡಯ್ಯ ಪುಟ್ಟಣ್ಣಯ್ಯ ಗಂಗಾಧರ ಎಂಬವರ ಹೆಸರಿಗೆ 3.38 ಎಕರೆ ಜಮೀನಿನ ಜಂಟಿ ಖಾತೆಯಿದೆ. ಇದೇ ಆರ್ ಟಿಸಿಯ 11 ನೇ ಕಾಲಂನಲ್ಲಿ ನಗರದ ಭೂಮಿತಿ ಕಾಯ್ದೆಗೆ ಒಳಪಟ್ಟಿದೆ ಎಂದಿದೆ. ಅಂದರೆ ಸರ್ಕಾರದ ಭೂಮಿ ಎಂದರ್ಥ ಎಂದು ಸ್ನೇಹಮಯಿ ಕೃಷ್ಣ ದೂರಿನಲ್ಲಿ ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಲಿಬಾಬ ಮತ್ತು 40 ಕಳ್ಳರ ಕಥೆಯ ತದ್ರೂಪವೇ ಸಿದ್ದರಾಮಯ್ಯರ ತಂಡ: ಡಿ.ವಿ. ಸದಾನಂದಗೌಡ

ಕಾಂಗ್ರೆಸ್ ಸರಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತಿದೆ: ಬಿ.ವೈ.ವಿಜಯೇಂದ್ರ

DGP Om Prakash murder: ಮೀನು ಊಟ ಮಾಡುತ್ತಿರುವಾಗಲೇ ಓಂ ಪ್ರಕಾಶ್ ಮೇಲೆ ನಡೆದಿತ್ತು ಡೆಡ್ಲೀ ಅಟ್ಯಾಕ್

Pope Francis Passes away: ಕ್ಯಾಥೋಲಿಕ್ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

Rahul Gandhi: ಚುನಾವಣೆ ಆಯೋಗವೇ ಅಕ್ರಮ ಮಾಡ್ತಿದೆ: ಅಮೆರಿಕಾದಲ್ಲಿ ಕಿಡಿ ಕಾರಿದ ರಾಹುಲ್ ಗಾಂಧಿ, ದೇಶದ್ರೋಹಿ ಎಂದ ಬಿಜೆಪಿ

ಮುಂದಿನ ಸುದ್ದಿ
Show comments