Webdunia - Bharat's app for daily news and videos

Install App

ಹೊಸಕೋಟೆಯಲ್ಲಿ ಮಗನನ್ನ ಗೆಲ್ಲಿಸಲು‌ ಎಂಟಿಬಿ ರಣತಂತ್ರ

Webdunia
ಗುರುವಾರ, 6 ಏಪ್ರಿಲ್ 2023 (18:00 IST)
ರಾಜ್ಯ ವಿಧಾನಸಭಾ ಚುನಾವಣೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವೆ ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ಮಗನನ್ನ ಗೆಲ್ಲಿಸಲು ಎಂಟಿಬಿ ರಣತಂತ್ರ ಎಣೆಯುತ್ತಿದ್ದಾರೆ. ಇನ್ನೂ ಬಿಜೆಪಿ ಟಿಕೆಟ್ ಘೋಷಣೆ ಮುನ್ನವೇ ಕ್ಷೇತ್ರದಲ್ಲಿ ಆಪರೇಷನ್ ಕಮಲ ಶುರುಮಾಡಲಾಗಿದೆ. ಸಂಸದ ಬಿಎನ್ ಬಚ್ಚೇಗೌಡರ ಆಪ್ತ ಹುಲ್ಲೂರು ಮಂಜುನಾಥ್ ರನ್ನ ಬಿಜೆಪಿಗೆ ಎಂಟಿಬಿ ಕರೆತಂದಿದ್ದಾರೆ. ಈ‌ ಭಾರಿ ಮಗನನ್ನ ಬಿಜೆಪಿ ಅಭ್ಯರ್ಥಿ ಮಾಡಿ‌‌‌ ಗೆಲ್ಲಿಸುವ ತಂತ್ರ ಮಾಡಿರುವ ಸಚಿವ ಎಂಟಿಬಿ ನಾಗರಾಜ್, ಸಂಸದ ಬಚ್ಚೇಗೌಡ ಆಪ್ತ ಪ್ರಮುಖ ಮುಖಂಡನಿಗೆ ಗಾಳ‌ ಹಾಕಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ. ಬಚ್ಚೇಗೌಡ ಕಾಲದಿಂದಲು ಅವರ ಜೊತೆಯಲ್ಲೆ ಗುರುತಿಸಿಕೊಂಡಿದ್ದ ಹುಲ್ಲೂರು ಮಂಜುನಾಥ್ ಇದೀಗ ಚುನಾವಣೆ ಬೆನ್ನಲ್ಲೆ ಎಂಟಬಿ ಪರ ಸೇರ್ಪಡೆಗೊಂಡಿದ್ದಾರೆ. ಇನ್ನೂ ಆ ಮೂಲಕ ಶಾಸಕ ಶರತ್ ಗೆ ಟಾಂಗ್ ಸಚಿವ ಎಂಟಿಬಿ ನಾಗರಾಜ್ ಟಾಂಗ್ ನೀಡಿದ್ದಾರೆ. ಅಲ್ಲದೆ ಕ್ಷೇತ್ರದ ಮತ್ತಷ್ಟು ಜನ ಪ್ರಮುಖ ಮುಖಂಡರಿಗೆ  ಎಂಟಿಬಿ ಗಾಳ ಹಾಕಿದ್ದು, ಈ ಭಾರಿ ಮಗ ನಿತೀನ್ ಪುರುಷೋತ್ತಮ್ರನ್ನ ಶತಾಯಗತಾಯ ಗೆಲ್ಲಿಸಿ ರಾಜಕೀಯ ನೆಲೆ ನೀಡಲು ಎಂಟಿಬಿ ರಣತಂತ್ರ ಹೂಡಿದ್ದಾರೆ. ಹೀಗಾಗೆ ಹೈಕಮಾಂಡ್ ಬಳಿಯು ಮಗನಿಗೆ ಟಿಕೇಟ್ ನೀಡುವಂತೆ ಪಟ್ಟು ಸಚಿವ ಎಂಟಿಬಿ ನಾಗರಾಜ್ ಪಟ್ಟು ಕೂಡ ಇಡಿದಿದ್ದಾರೆ. ಹೀಗಾಗಿ ಹೊಸಕೋಟೆಯಲ್ಲಿ ಹೊಸ ತಲೆಮಾರಿನ ರಾಜಕೀಯ ರಂಗೇರಲಿದೆ. ಈ ಭಾರಿಯ ಚುನಾವಣೆಯಲ್ಲಿ ಎಂಟಿಬಿ ಮತ್ತು ಬಚ್ಚೇಗೌಡ ಮಕ್ಕಳ ಕಾಳಗ ನಡೆಯಲಿದ್ದು, ವಿಜಯಮಾಲೆ ಧರಿಸಬೇಕು ಅಂತ ಎರಡು ಕಡೆಯಿಂದ ಭಾರಿ ರಣತಂತ್ರ ಹೂಡಲಾಗ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್- ಇರಾನ್ ಸಂಘರ್ಷ: ವಿಮಾನಗಳ ಹಾರಾಟ ಸ್ಥಗಿತದಿಂದ ಸಂಕಷ್ಟಕ್ಕೆ ಸಿಲುಕಿದ 18 ಕನ್ನಡಿಗರು

Video: ಪ್ರಿಯಾಂಕಾ ಗಾಂಧಿ ಉದ್ಘಾಟನೆ ಮಾಡಬೇಕೆನ್ನುವಷ್ಟರಲ್ಲಿ ಬಿದ್ದೇ ಹೋಯ್ತು ಫಲಕ

ಅಹಮದಾಬಾದ್‌ ವಿಮಾನ ದುರಂತ: ಇನ್ನೂ ಗುರುತು ಪತ್ತೆಯಾಗದ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹ

ಚುರುಕುಗೊಂಡ ಮುಂಗಾರು: ಮುಂದಿನ ಮೂರು ದಿನ ವರುಣ ಅಬ್ಬರ, ಆರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

ಏರ್‌ ಇಂಡಿಯಾ ದುರಂತ ಬೆನ್ನಲ್ಲೇ ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ: ಪೈಲಟ್ ಸೇರಿ 7 ಮಂದಿ ಸಾವು

ಮುಂದಿನ ಸುದ್ದಿ
Show comments