Select Your Language

Notifications

webdunia
webdunia
webdunia
webdunia

ದಿನೇಶ್​​ ಗುಂಡೂರಾವ್ ಸಿದ್ದರಾಮಯ್ಯರ ಚೇಲಾ ನಿಜ- ಸೋಮಶೇಖರ್​​ ಹೇಳಿಕೆಯನ್ನ ಸಮರ್ಥಿಸಿಕೊಂಡ ಎಂಟಿಬಿ

ದಿನೇಶ್​​ ಗುಂಡೂರಾವ್ ಸಿದ್ದರಾಮಯ್ಯರ ಚೇಲಾ ನಿಜ- ಸೋಮಶೇಖರ್​​ ಹೇಳಿಕೆಯನ್ನ ಸಮರ್ಥಿಸಿಕೊಂಡ ಎಂಟಿಬಿ
ಬೆಂಗಳೂರು , ಶನಿವಾರ, 28 ಸೆಪ್ಟಂಬರ್ 2019 (11:38 IST)
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್ ಸಿದ್ದರಾಮಯ್ಯರ ಚೇಲಾ ಎಂಬ ಎಸ್​​.ಟಿ ಸೋಮಶೇಖರ್​​ ಹೇಳಿಕೆಯನ್ನು  ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಸಮರ್ಥಿಸಿಕೊಂಡಿಸಿದ್ದಾರೆ.




ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನೇಶ್​​ ಗುಂಡೂರಾವ್​​ ಬಗ್ಗೆ ಎಸ್​​.ಟಿ ಸೋಮಶೇಖರ್​​ ಏನು ಹೇಳಿದ್ದಾರೋ ಅದು ಸರಿಯಾಗಿದೆ. ಅವರ ಹೇಳಿಕೆಗೆ ನನ್ನ ಸಹಮತವೂ ಇದೆ ಎಂದು ಹೇಳಿದ್ದಾರೆ.


ಸಿದ್ದರಾಮಯ್ಯ ಮತ್ತು ಕೆ.ಎಚ್​​ ಮುನಿಯಪ್ಪ ಜಗಳದ ಬಗ್ಗೆ ಮಾತನಾಡಿದ ಅವರು, ಮಾಜಿ ಸಂಸದ ಕೆ.ಎಚ್​​ ಮುನಿಯಪ್ಪರನ್ನು ಸೋಲಿಸಲು ಯಾರೆಲ್ಲಾ ಕೆಲಸ ಮಾಡಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಮಾಜಿ ಸ್ಪೀಕರ್​​ ರಮೇಶ್​​ ಕುಮಾರ್​​ ಅವರನ್ನು ಸೋಲಿಸಲು ಕಾರಣವಾಗಿದ್ದಾರೆ. ಹಾಗಾಗಿ ಮುನಿಯಪ್ಪರ ಮಾತುಗಳು ಅಕ್ಷರಶಃ ನಿಜ. ಈ ಕುರಿತಂತೆ ಕೆ.ಎಚ್​​ ಮುನಿಯಪ್ಪ ಕಾಂಗ್ರೆಸ್​​ ಹೈಕಮಾಂಡ್​​ಗೆ ದೂರು ನೀಡಿದ್ದರೂ, ರಮೇಶ್​​ ಕುಮಾರ್​​ ವಿರುದ್ಧ ಯಾಕೆ? ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದ ರೈತರ ಕಣ್ಣೀರು ಒರೆಸಲು ಜೋಡೆತ್ತು ಈಗ ಬರಲಿ- ಶಿವರಾಮೇಗೌಡ ಟಾಂಗ್