Select Your Language

Notifications

webdunia
webdunia
webdunia
webdunia

‘ಮಲ್ಯ ಆಸ್ಪತ್ರೆಗೆ ನಲಪಾಡ್ ವಿದ್ವತ್ ನೋಡಲು ಹೋಗಿದ್ದರೆ ತಪ್ಪೇನು?’

‘ಮಲ್ಯ ಆಸ್ಪತ್ರೆಗೆ ನಲಪಾಡ್ ವಿದ್ವತ್ ನೋಡಲು ಹೋಗಿದ್ದರೆ ತಪ್ಪೇನು?’
ಬೆಂಗಳೂರು , ಸೋಮವಾರ, 26 ಫೆಬ್ರವರಿ 2018 (16:13 IST)
ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸೆಷನ್ಸ್ ಕೋರ್ಟ್ ನಲ್ಲಿ ವಾದ ಪ್ರತಿವಾದ ನಡೆದಿದೆ.
 

ಈ ಸಂದರ್ಭದಲ್ಲಿ ನಲಪಾಡ್ ಪರ ವಕೀಲರು ಗಾಯಾಳುವನ್ನು ನೋಡಲು ನಲಪಾಡ್ ಆಸ್ಪತ್ರೆಗೆ ಹೋಗಿದ್ದರು. ಅದರಲ್ಲಿ ತಪ್ಪೇನು? ಅಪಘಾತ ಮಾಡಿದವರೇ ಆಸ್ಪತ್ರೆಗೆ ದಾಖಲಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಆರೋಪಿಗೆ ಹಲ್ಲೆ ಮಾಡುವ ಉದ್ದೇಶವಿರಲಿಲ್ಲ. ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಹಲ್ಲೆ ನಡೆಸಲಾಗಿಲ್ಲ. ಇದೀಗ ವಿದ್ವತ್ ಸುಧಾರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ನಲಪಾಡ್ ಮೇಲೆ ಕೊಲೆ ಯತ್ನ ಕೇಸ್ ಸೆಕ್ಷನ್ 307 ರ ಅಡಿಯಲ್ಲಿ ಕೇಸ್ ದಾಖಲಿಸಿರುವುದು ಸರಿಯಲ್ಲ. ಹೀಗಾಗಿ ಈ ಅಂಶಗಳನ್ನು ಗಮನಿಸಿ ಜಾಮೀನು ಮಂಜೂರು ಮಾಡಬೇಕು ಎಂದು ವಾದಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣುಮಕ್ಕಳಿಗೊಂದು ಸಂತಸದ ಸುದ್ದಿ; 'ಅಮ್ಮ ಸ್ಕೂಟರ್' ಯೋಜನೆಗೆ ಚಾಲನೆ