Select Your Language

Notifications

webdunia
webdunia
webdunia
webdunia

ಆರೋಪಿಗಳ ಮೊಬೈಲ್​​ FSLಗೆ ರವಾನೆ

ಆರೋಪಿಗಳ ಮೊಬೈಲ್​​ FSLಗೆ ರವಾನೆ
bangalore , ಬುಧವಾರ, 2 ನವೆಂಬರ್ 2022 (19:02 IST)
ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮಾಗಡಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸ್ತಿದ್ದಾರೆ. ಮೂವರು ಆರೋಪಿಗಳಾದ ಮೃತ್ಯುಂಜಯ ಸ್ವಾಮೀಜಿ, ನೀಲಾಂಬಿಕೆ, ಮಹದೇವಯ್ಯ ಮೊಬೈಲ್​​​ನ್ನ FSLಗೆ ರವಾನೆ ಮಾಡಲಾಗಿದ್ದು, ಕಳೆದ 6 ತಿಂಗಳ ಕಾಲ್‌ ಡಿಟೇಲ್ಸ್‌ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ. ಈ ಪ್ರಕರಣ ಸಂಬಂಧ ಸಚ್ಚಿದಾನಂದ ಮೂರ್ತಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ನಡೆಸಲಾಗ್ತಿದ್ದು, ಆರೋಪಿಗಳು ಬಾಯಿ ಬಿಡುತ್ತಿಲ್ಲ. ರಾಮನಗರ S.P.ಸಂತೋಷ್ ಬಾಬುರಿಂದ ಕೂಡ ವಿಚಾರಣೆ ನಡೆಸಲಾಗಿದೆ. ವಿಡಿಯೋ ರೆಕಾರ್ಡ್ ಆಗಿರೋ ಮೂಲ ಮೊಬೈಲ್​​ಗಾಗಿ ಖಾಕಿ ಹುಡುಕಾಟ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹತ್ಯೆ ಆರೋಪಿಗಳ ಪತ್ತೆಗೆ ಬಹುಮಾನ