Webdunia - Bharat's app for daily news and videos

Install App

ಕಮೀಷನರ್ ನ ಜನ್ಮ ಜಾಲಾಡಿದ ಶಾಸಕ?

Webdunia
ಶನಿವಾರ, 23 ಮಾರ್ಚ್ 2019 (16:03 IST)
ನಾನು ಇತ್ತೀಚೆಗೆ ಬಿಡಿಎ ಕಮಿಷನರ್ ರಾಕೇಶ್ ಸಿಂಗ್ ಮೇಲೆ ಬಂದ ಆರೋಪಕ್ಕೆ ದೂರು ಕೊಟ್ಟಿದ್ದೆ. ಅದಕ್ಕೆ ನನ್ನ ವಿರುದ್ದ ಪಿತೂರಿ‌ ನಡೆಯುತ್ತಿದೆ. ಯಾವ ಕೆಲಸವನ್ನು ಆಯುಕ್ತ ರಾಕೇಶ್ ಸಿಂಗ್ ಮಾಡುತ್ತಿಲ್ಲ. ಹೀಗಂತ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್ ಟಿ.  ಸೋಮಶೇಖರ್ ಹೇಳಿದ್ದಾರೆ.

ಅವರ ವಿರುದ್ದ ಮಾತಾಡಿದ್ರೆ ಯಾವ ಕೆಲಸವನ್ನು ಮಾಡೋದಿಲ್ಲ. ಅವರು ಮಾಡೋದು  ಚಿತ್ರನಟಿಯ ಕೆಲಸ ಮಾತ್ರ. ಖಾಸಗಿ ಹೋಟೆಲ್ ಗೆ ದಾಖಲೆ ತರಿಸಿಕೊಂಡು ಪರಿಶೀಲಿಸುತ್ತಾರೆ. ಬಾಲು ಎಂಬ ಏಜೆಂಟ್ ಮೂಲಕ ರಾಕೇಶ್ ಸಿಂಗ್ ಕೆಲಸ ಮಾಡುತ್ತಿದ್ದಾರೆ. 10 ಫೈಲ್ ನ್ನು ಕ್ಲಿಯರ್ ಮಾಡಲು ಅಶೋಕ್ ಹೋಟೆಲ್ ನಲ್ಲಿ ರೂಮ್ ಮಾಡಿರೋದು. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಬಂದಿದೆ ಎಂದು ಆಯುಕ್ತರ ವಿರುದ್ಧ ಎಸ್. ಟಿ. ಸೋಮಶೇಖರ್ ಆರೋಪ ಮಾಡಿದರು.

ಆಯುಕ್ತರ  ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಎಸ್. ಟಿ. ಸೋಮಶೇಖರ್, ರಾಕೇಶ್ ಸಿಂಗ್ ಅವರ ಅಪ್ಪನಿಗೆ ಹುಟ್ಟಿದ್ದಾದ್ರೆ ನಿಜ ಹೇಳಲಿ. ಎಲುಬಿಲ್ಲದ ನಾಲಿಗೆ ಅವನದ್ದು ಎಂದ ಅವರು, ನಾನು ಅನ್ನ ತಿನ್ನುವವನು, ಅಗತ್ಯ ಬಿದ್ದರೆ ನನ್ನ ಬಳಿ ಇವರ ಅವ್ಯವಹಾರದ 100 ಕೋಟಿಗೂ ಅಧಿಕ ಮೌಲ್ಯದ ಅವ್ಯವಹಾರದ ದಾಖಲೆ ನನ್ನ ಬಳಿ ಇದೆ. ಸಮಯ ಬಂದರೆ, ಬಿಡುಗಡೆ ಮಾಡುತ್ತೇನೆ. ಅದಕ್ಕೂ ಮುನ್ನ ನಮ್ಮ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ ಅಂತ ಸುದ್ದಿಗೋಷ್ಠಿಯಲ್ಲಿ ಹೇಳಿದ್ರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments