Select Your Language

Notifications

webdunia
webdunia
webdunia
Friday, 11 April 2025
webdunia

ಸಿನಿಮಾ ನಟರು ಸಿನಿಮಾದಲ್ಲಷ್ಟೇ ಹೀರೊ. ಆದರೆ, ನಿಜವಾಗಿ ದೇವೇಗೌಡರೇ ಹೀರೋ- ಶಾಸಕ ಡಾ.ಕೆ.ಅನ್ನದಾನಿ

ಮಂಡ್ಯ
ಮಂಡ್ಯ , ಬುಧವಾರ, 20 ಮಾರ್ಚ್ 2019 (08:52 IST)
ಮಂಡ್ಯ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಿಜವಾದ ಹೀರೋ ಎಂದು ಹೇಳುವ ಮೂಲಕ ಶಾಸಕ ಡಾ.ಕೆ.ಅನ್ನದಾನಿ ಸಿನಿಮಾ ನಟರಿಗೆ ಟಾಂಗ್ ನೀಡಿದ್ದಾರೆ.

ಮಳವಳ್ಳಿ ತಾಲೂಕು ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ  ನಿಖಿಲ್ ಪರವಾಗಿ ನಡೆಸಿದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು,’ ಸಿನಿಮಾ ನಟರು ಸಿನಿಮಾದಲ್ಲಷ್ಟೇ ಹೀರೊ. ಆದರೆ, ನಿಜವಾಗಿ ದೇವೇಗೌಡರೇ ಹೀರೋ. ಮೇಲಾಗಿ ರೈತರ ಹೀರೋ. ಹಾಗಾಗಿ ಜಿಲ್ಲೆಯಲ್ಲಿ ಯಾವುದೇ ಹೀರೊಗಳು ಬಂದರೂ ಏನೂ ಆಗೋದಿಲ್ಲ ಎಂದು ಹೇಳಿದ್ದಾರೆ.

 

ಇದೇ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಮೈತ್ರಿ ಧರ್ಮಕ್ಕೆ ಅನುಗುಣವಾಗಿ ನಡೆದುಕೊಳ್ಳಲಿದ್ದಾರೆ ಅನ್ನೋ ವಿಶ್ವಾಸವಿದೆ. ನಾವು ಎಚ್ಚರಿಕೆಯಿಂದ ಚುನಾವಣೆ ಮಾಡಿ ನಿಖಿಲ್ ಗೆಲುವಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ನಿಮಗೂ ರಾಜಕಾರಣಕ್ಕೂ ಸಂಬಂಧವಿಲ್ಲ. ಸುಮ್ಮನೆ ಶೂಟಿಂಗ್ ಮಾಡಿ-ದರ್ಶನ್, ಯಶ್ ಗೆ ಜೆಡಿಎಸ್ ಶಾಸಕನಿಂದ ಎಚ್ಚರಿಕೆ