Webdunia - Bharat's app for daily news and videos

Install App

ಜೋಡೆತ್ತಿನ ಬಂಡಿ ಓಡಿಸಿದ ಶಾಸಕ

Webdunia
ಶನಿವಾರ, 15 ಫೆಬ್ರವರಿ 2020 (18:30 IST)
ಜೋಡೆತ್ತಿನ ಬಂಡಿ ಓಡಿಸಿ ಶಾಸಕ ನೆಹರು ಗಮನ ಸೆಳೆದಿದ್ದಾರೆ.

ಹಾವೇರಿಯಲ್ಲಿ ನಡೆದ ರಾಜ್ಯ ಮಟ್ಟದ ಜಾನಪದ ಜಾತ್ರೆಯ ಕಲಾಜಾಥಾ ನೋಡುಗರ ಗಮನ ಸೆಳೆಯಿತು. ಮುರುಘಾಮಠದ ಆವರಣದಲ್ಲಿ ಕಲಾಜಾಥಾಕ್ಕೆ ಚಾಲನೆ ನೀಡಿದ್ರು ಶಾಸಕ ನೆಹರು ಓಲೇಕಾರ. ಜೋಡೆತ್ತಿನ ಬಂಡಿ ಓಡಿಸುವುದರ ಮೂಲಕ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಜಾನಪದ ಜಾತ್ರೆಯ ಮೆರವಣಿಗೆಯಲ್ಲಿ 18ಕ್ಕೂ ಹೆಚ್ಚು ಕಲಾ ತಂಡಗಳು, ಯುವಕ ಸಂಘಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ದೇಶಿ ಪರಂಪರೆಯ ವೈಭವ ಸಾರಿದರು.

ಪಾರಂಪರಿಕ ಕಹಳೆ ವಾದ್ಯಗಳನ್ನು ಊದುವುದರೊಂದಿಗೆ ಆರಂಭಿಸಲಾದ ಜಾನಪದ ಜಾತ್ರೆಯ ಮೆರವಣಿಗೆಯುದ್ಧಕ್ಕೂ ವೈವಿಧ್ಯಮಯ ದೇಶಿ ವಾದ್ಯಗಳ ನಿನಾದಾ, ಜನಪದ ಕುಣಿತಗಳು, ಕೋಲಾಟ, ಡೊಳ್ಳು ಕುಣಿತ, ಕರಡಿಮಜಲು, ಹೆಜ್ಜೆಮೇಳ, ನಂದಿಕೋಲು ಕುಣಿತ, ನವಿಲು ಕುಣಿತ, ಜಗ್ಗಲಿಗೆ, ನಗಾರಿ ಹೀಗೆ ಹಲವು ಬಗೆಯ ಗ್ರಾಮೀಣ ಸೊಗಡಿನ ಕಲೆಗಳ ಅನಾವರಣ ನೋಡುಗರಿಗೆ ರೋಮಾಂಚನಗೊಳಿಸಿತು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments