Publish Date: Sat, 15 Feb 2020 (17:59 IST)
Updated Date: Sat, 15 Feb 2020 (18:01 IST)
ರಾಷ್ಟ್ರಗೀತೆ, ನಾಡಗೀತೆಗಳಿಗೆ ಗೌರವ ಕೊಡಿ ಅಂತ ಮಕ್ಕಳಿಗೆ ಹೇಳಬೇಕಿದ್ದ ಶಿಕ್ಷಕರೇ ಮಾಡಬಾರದ ಕೆಲಸ ಮಾಡಿ ಸಸ್ಪೆಂಡ್ ಆಗಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ನ ಹಿಪ್ಪಳಗಾಂವನಲ್ಲಿರೋ ಸರ್ಕಾರಿ ಶಾಲೆಯ ಶಿಕ್ಷಕ ವಿರೇಶ್ ಮತ್ತು ಗಂಗಾರಾಮ ತಾಂಡಾದಲ್ಲಿರೋ ಸರ್ಕಾರಿ ಶಾಲೆಯ ಶಿಕ್ಷಕ ವಿಜಯಕುಮಾರ್ ರಾಠೋಡ್ ನಾಡಗೀತೆ ಹಾಡೋವಾಗ ಮೂತ್ರ ಮಾಡ್ತಿದ್ದರು.
ಬೀದರ್ ನ ಪಶು ವಿವಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಾಡಗೀತೆಗೆ ಈ ಶಿಕ್ಷಕರು ಅವಮಾನ ಮಾಡಿದ್ದಾರೆ.
ಹೀಗಾಗಿ ನಾಡಗೀತೆಗೆ ಅವಮಾನಿಸಿದ ಶಿಕ್ಷಕರನ್ನು ಸಸ್ಪೆಂಡ್ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.