Select Your Language

Notifications

webdunia
webdunia
webdunia
webdunia

ಶಾಸಕ ಸುನೀಲ್ ಕುಮಾರ ಉಗ್ರಗಾಮಿ- ವಿವಾದ ಹುಟ್ಟುಹಾಕಿದ ರಮನಾಥ ರೈ

ಶಾಸಕ ಸುನೀಲ್ ಕುಮಾರ ಉಗ್ರಗಾಮಿ- ವಿವಾದ ಹುಟ್ಟುಹಾಕಿದ ರಮನಾಥ ರೈ
ಉಡುಪಿ , ಶನಿವಾರ, 27 ಜನವರಿ 2018 (08:44 IST)

ಬಿಜೆಪಿ ಶಾಸಕ ಸುನೀಲ್ ಕುಮಾರ ಉಗ್ರಗಾಮಿ ಎಂದು ಸಚಿವ ರಮಾನಾಥ ರೈ ಅವರು ವಿವಾದ ಹುಟ್ಟುಹಾಕಿದ್ದಾರೆ.

ಶಾಸಕ ಸುನೀಲ್ ಕುಮಾರ ಕ್ಷೇತ್ರ ಕಾರ್ಕಳದ ಅತ್ತೂರು ಚರ್ಚಿಗೆ ಬಂದಿದ್ದ ಅವರು, ಸುನೀಲ್ ಕುಮಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುನೀಲ್ ಕುಮಾರ್ ಎಷ್ಟೇ ಮಾತನಾಡಿದರೂ, ನನ್ನನ್ನು ಏನೂ ಮಾಡಲು ಆಗಲ್ಲ. ನನ್ನ ಕ್ಷೇತ್ರಕ್ಕೆ ಬಂದು ಸುಳ್ಳು ಆರೋಪ ಮಾಡಿದ್ದಾರೆ. ಕನಿಷ್ಠ ಜ್ಞಾನವಿಲ್ಲದ ಸುನೀಲ್ ಕುಮಾರ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮತೀಯವಾದ ಮನಸ್ಸಿನಲ್ಲಿ ತುಂಬಿಕೊಂಡಿರುವ ಸುನೀಲ್ ಕುಮಾರ ಸೂಕ್ಷ್ಮ ಪ್ರದೇಶವಾದ ಬಂಟ್ವಾಳದಲ್ಲಿ ಪ್ರಚೋದನಾತ್ಮಕವಾಗಿ ಮಾತನಾಡುವುದು ಸರಿಯಲ್ಲ. ಜೋಳಿಗೆ ಹಿಡಿದು ಬಂದಿದ್ದ ಸುನೀಲ್ ಎಷ್ಟು ಸಂಪತ್ತು ಮಾಡಿಕೊಂಡಿದ್ದಾರೆ ಎಂಬುದು ಗೊತ್ತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಣ ತೆಗೆಯುವ ಪಾಕಿಸ್ತಾನಿಯರಿಗೆ ಸಿಹಿ ಕೊಡದ ಭಾರತೀಯ ಯೋಧರು