ಕರ್ನಾಟಕದಲ್ಲಿ ನೀಟ್ ಪರೀಕ್ಷೆ ರದ್ದತಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಶಾಸಕ ಪ್ರದೀಪ್ ಈಶ್ವರ್

Krishnaveni K
ಗುರುವಾರ, 25 ಜುಲೈ 2024 (13:07 IST)
ಬೆಂಗಳೂರು: ಕರ್ನಾಟಕದಲ್ಲಿ ನೀಟ್ ಪರೀಕ್ಷೆಯನ್ನು ರದ್ದತಿ ಮಾಡಬೇಕು ಎಂದು ನಿರ್ಣಯ ಮಂಡಿಸಲಾಗಿತ್ತು. ಈ ನಡುವೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮಹತ್ವದ ಹೇಳಿಕೆ ನೀಡಿದ್ದಾರೆ.

ಪ್ರದೀಪ್ ಈಶ್ವರ್ ಮಾಧ್ಯಮಗಳ ಮುಂದೆ ನೀಟ್ ರದ್ದತಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಪ್ರದೀಪ್ ಈಶ್ವರ್ ತಮ್ಮದೇ ಪರಿಶ್ರಮ ಅಕಾಡಮಿ ಮೂಲಕ ನೀಟ್ ಪರೀಕ್ಷೆಗೆ ತರಬೇತಿ ನೀಡುತ್ತಿದ್ದಾರೆ. ಹೀಗಾಗಿ ಇಂದು ಮಾಧ್ಯಮಗಳ ಮುಂದೆ ನೀಟ್ ರದ್ದಾಗಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

‘ಈಗ ನಾನು ಒಬ್ಬ ಟೀಚರ್ ಆಗಿ ಹೇಳಲಾ? ಶಾಸಕನಾಗಿ ಹೇಳ್ಬೇಕಾ? ಒಬ್ಬ ಟೀಚರ್ ಆಗಿ ಹೇಳುವುದಾದರೆ ನನಗಿರುವ ಸ್ಪಷ್ಟ ಮಾಹಿತಿ ಪ್ರಕಾರ ನೀಟ್ ಪರೀಕ್ಷೆಯನ್ನು ತಮಿಳುನಾಡು ಮತ್ತು ಕರ್ನಾಟಕ ಕ್ಯಾಬ್ ಕ್ಯಾನ್ಸಲ್ ಮಾಡಿ ಸಿಇಟಿಯಲ್ಲೇ ಸೀಟು ಕೊಡಿಸೋಣ ಎಂದು ತೀರ್ಮಾನ ಮಾಡಿದೆ. ಒಬ್ಬ ಶಾಸಕನಾಗಿ ಇದಕ್ಕೆ ಬೆಂಬಲವಿದೆ. ಆದರೆ ಇದರ ಮುಂದುವರಿದು ಈ ತೀರ್ಮಾನ ಸುಪ್ರೀಂಕೋರ್ಟ್ ಗೆ ಹೋಗುತ್ತೆ. ಆದರೆ ಸುಪ್ರೀಂಕೋರ್ಟ್ ನಲ್ಲಿ ಇದು ನಿಲ್ಲಲ್ವೇನೋ ಎಂದು ನನಗನಿಸುತ್ತದೆ’ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ.

‘ಯಾಕೆಂದರೆ ತಮಿಳುನಾಡಿನಲ್ಲಿ ನೀಟ್ ರದ್ದತಿಗೆ ಸುಗ್ರೀವಾಜ್ಞೆ ಹೊರಡಿಸಿದ್ದರು. ಆದರೂ ಆಗಲಿಲ್ಲ. ಬಹಳಷ್ಟು ಜನ ಹೇಳ್ತಾ ಇದ್ದರು. ನೀಟ್ ಮರುಪರೀಕ್ಷೆ ಆಗುತ್ತೆ ಅಂತ. ಆದರೆ ನಾನು ಮೊದಲೇ ಹೇಳಿದ್ದೆ. ಯಾವುದೋ ಎರಡು ಸೆಂಟರ್ ನಲ್ಲಿ ಅಕ್ರಮ ನಡೆದಿದೆ ಎಂದರೆ 24 ಲಕ್ಷ ಜನಕ್ಕೆ ಸಮಸ್ಯೆ ಮಾಡಲು ಸುಪ್ರೀಂಕೋರ್ಟ್ ಒಪ್ಪಲ್ಲ. ನನಗೆ ಗೊತ್ತಿರುವ ಪ್ರಕಾರ ನೀಟ್ ಬೇಡ ಎಂದು ಎಷ್ಟು ರಾಜ್ಯಗಳು ಕೋರ್ಟ್ ಗೆ ಹೋಗಬಹುದು? ಆಗ ನೀಟ್ ರದ್ದತಿಯಾಗಲ್ಲ’ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಸ್ ಓಡಿಸುತ್ತಲೇ ಮೊಬೈಲ್ ನಲ್ಲಿ ಲಲ್ಲೆ ಹೊಡೆಯುತ್ತಿದ್ದ ಚಾಲಕ: Video

ತರಬೇತಿ ಕ್ಲಾಸ್‌ಗೆ ಮಂಗನ ಎಂಟ್ರಿ: ಗುಜರಾತ್‌ನಲ್ಲಿ ಶಿಕ್ಷಕರ ಸೆಷನ್ ಮಧ್ಯೆ ವಾನರನ ಹವಾ Video

Video: ಯಮುನಾ ನದಿ ತೀರದಲ್ಲಿ ದೈತ್ಯ ಜಿರಳೆಗಳ ದಂಡು ಕಂಡು ದಂಗಾದ ಜನ

ಓಡು ಓಡಲೇ... ಪೆಟ್ರೋಲ್ ಗಾಗಿ ಕ್ಯಾನ್ ಹಿಡ್ಕೊಂಡು ಓಡಿದ ಜನ ಸಾಗರ Video

ಕಾಕ್ರೋಚ್ ಜನತಾ ಪಾರ್ಟಿ ಮುಂದೆ ಚುನಾವಣೆಗೆ ಸ್ಪರ್ಧಿಸುತ್ತದೆಯೇ: ಕುತೂಹಲಕಾರಿ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments