Webdunia - Bharat's app for daily news and videos

Install App

ಬಿಜೆಪಿಯವರ ಹಗರಣದ ಲಿಸ್ಟ್ ಹೊರಗೆಳಿತೀನಿ ಹುಷಾರ್ ಎಂದ ಡಿಕೆ ಶಿವಕುಮಾರ್

Krishnaveni K
ಗುರುವಾರ, 25 ಜುಲೈ 2024 (12:25 IST)
ಬೆಂಗಳೂರು: ಮುಡಾ ಹಗರಣದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿಯವರ ಹಗರಣದ ಲಿಸ್ಟ್ ಹೊರಗೆಳೀತಿವಿ ಹುಷಾರ್ ಎಂದಿದ್ದಾರೆ.

ಮುಡಾ ಹಗರಣದ ಬಗ್ಗೆ ಸದನದಲ್ಲಿ  ಚರ್ಚೆಯಾದಾಗ ಮೊದಲು ಅವರು ಮಾತನಾಡಿದರು. ನಾವು ಮಾತನಾಡುವಾಗ ಕೇಳಿಸಿಕೊಳ್ಳಲಿಲ್ಲ. ಯಾವಾಗ ನಾವು ಅವರ ಕಾಲದ ಹಗರಣದ ಬಗ್ಗೆ ಪಟ್ಟಿ ತೆಗೆದ್ವೋ ಆಗ ಈ ರೀತಿ ಪ್ರತಿಭಟನೆಯ ನಾಟಕವಾಡ್ತಿದ್ದಾರೆ ಎಂದು ಇಂದು ಸದನ ಆರಂಭಕ್ಕೆ ಮುನ್ನ ಮಾಧ್ಯಮಗಳಿಗೆ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ನಮ್ಮದು ಹಗರಣ ಆಗಿಲ್ಲ ಅಂತ ಹೇಳಲ್ಲ. ಯಾರೋ ಒಬ್ಬ ಅಧಿಕಾರಿಯಿಂದ 80 ಕೋಟಿ ಅವ್ಯವಹಾರ ಆಗಿದೆ. ಉಪ್ಪು ತಿಂದವ ನೀರು ಕುಡಿಯುತ್ತಾನೆ. ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆಯಾಗುತ್ತದೆ. ಆದರೆ ಅವರ ಕಾಲದಲ್ಲಿ ಕೋಟಿಗಟ್ಟಲೆ ಅವ್ಯವಹಾರ ಆಗಿಲ್ವಾ? ಅವರದ್ದು ತೆಗೆತೀವಿ ಎಂದಿದ್ದಕ್ಕೆ ಪ್ರತಿಭಟನೆ ಮಾಡ್ತಿದ್ದಾರೆ.

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಎಲ್ಲರೂ ಅಕ್ರಮವಾಗಿ ಸೈಟು ಹಂಚಿಕೊಂಡಿದ್ದಾರೆ. ಇದರ ಲೆಕ್ಕ ತೆಗಿತೀವಿ ನೋಡ್ತಾ ಇರಿ ಎಂದು ಎಚ್ಚರಿಕೆ ನೀಡಿ ಸದನ ಕಲಾಪಕ್ಕೆ ತೆರಳಿದ್ದಾರೆ. ಬಳಿಕ ಸದನದಲ್ಲೂ ಡಿಕೆಶಿ ಪ್ರತಿಪಕ್ಷಗಳನ್ನು ಸೈಲೆಂಟ್ ಆಗಿಸಿದ್ದಾರೆ. ಸ್ಪೀಕರ್ ಆಸನದ ಮುಂಭಾಗ ನಿಂತು ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಿದ್ದ ಪ್ರತಿಪಕ್ಷ ಶಾಸಕರನ್ನು ಸುಮ್ಮನಿರುವಂತೆ ಕೈ ಸನ್ನೆ ಮೂಲಕವೇ ಸೈಲೆಂಟಾಗಿಸಲು ಪ್ರಯತ್ನಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಸಂಪೂರ್ಣವಾಗಿ ರದ್ದು

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Video: ಆಪರೇಷನ್ ಸಿಂಧೂರ್ ಶೌರ್ಯದ ಬಗ್ಗೆ ಹೇಳಿದ್ರೆ ವಿಪಕ್ಷಗಳು ಮೇಜು ತಟ್ಟಲ್ಲ ಯಾಕೆ: ಅನುರಾಗ್ ಠಾಕೂರ್

ಪ್ರೆಗ್ನೆನ್ಸಿಗೆ ಟ್ರೈ ಮಾಡುತ್ತಿದ್ದರೆ ಮಹಿಳೆಯರು ಇದನ್ನು ಗಮನಿಸಬೇಕು ಅಂತಾರೆ ಡಾ ಪದ್ಮಿನಿ ಪ್ರಸಾದ್

ಅಂದು ಮುಖ್ಯಮಂತ್ರಿ ಆಗುವ ಆಸೆ ಈಡೇರಲಿಲ್ಲ ಎಂದು ಈಗ ಈಡೇರಿಸಿಕೊಳ್ತಾರಾ ಮಲ್ಲಿಕಾರ್ಜುನ ಖರ್ಗೆ

ಮುಂದಿನ ಸುದ್ದಿ
Show comments