Webdunia - Bharat's app for daily news and videos

Install App

ಅಕ್ಟೋಬರ್ 7 ರಂದು ಮಿಸ್ಟರ್ ಸೌಥ್ ಆಯ್ಕೆಗೆ ನಗರದಲ್ಲಿ ಮ್ಯಾನ್‌ಹಂಟ್

Webdunia
ಸೋಮವಾರ, 8 ಅಕ್ಟೋಬರ್ 2018 (15:57 IST)
ಅಕ್ಟೋಬರ್ 7 ರಂದು ದಕ್ಷಿಣ ಭಾರತದ ಮಿಸ್ಟರ್ ಇಂಡಿಯಾ ಆಯ್ಕೆಗೆ ನಗರದಲ್ಲಿ ಮ್ಯಾನ್ ಹಂಟ್ ಆಡಿಷನ್ ನಡೆಯಲಿದೆ.
ದೀಪಾಲಿ ಪಡ್ನಿಸ್ ನಿರ್ದೇಶನದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಪುರುಷರ ಪ್ಯಾಶನ್ ಶೋ ಏರ್ಪಡಿಸುತ್ತ ಬಂದಿರುವ ವಿಶ್ವದ ಏಕೈಕ ಸಂಸ್ಥೆ ಮಿಸೆಸ್ ಇಂಡಿಯಾ ಪ್ರದರ್ಶನ ಪ್ರೊಡಕ್ಷನ್ ಪ್ರೈ.ಲಿ. ಸಂಸ್ಥೆ  ಈ ವರ್ಷದ ದಕ್ಷಿಣ ಭಾರತದ ಮಿಸ್ಟರ್ ಇಂಡಿಯಾ ಆಯ್ಕೆಗೆ ಮ್ಯಾನ್ ಹಂಟ್ ಸೌಥ್ ಆಯ್ಕೆ ಭಾನುವಾರ ಬೆಳಿಗ್ಗೆಯಿಂದ ನಗರದ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಝೋನ್ ಬೈ ದಿ ಪಾರ್ಕ್ ಹೊಟೆಲ್‌ನಲ್ಲಿ ನಡೆಯಲಿದೆ.
 
ಜಾನ್ ಅಬ್ರಾಹಂ, ದಿನೋ ಮೋರಿಯಾ, ರಾಜೀವ್ ಸಿಂಗ್‌ರಂತ ಮಾಡೆಲ್‌ಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ಹೆಮ್ಮೆಯ ಸಂಸ್ಥೆ. ದಕ್ಷಿಣ ಭಾರತದ ಮಿಸ್ಟರ್ ಸೌಥ್ ಆಯ್ಕೆಯ ಕಾರ್ಯಕ್ರಮವನ್ನು 2015 ರ ಮಿಸೆಸ್ ಏಷಿಯಾ ಇಂಟರ್‌ನ್ಯಾಷನಲ್ ಪ್ರಶಸ್ತಿ ಪುರಸ್ಕೃತೆ ಪ್ರತಿಭಾ ಸಂಶಿಮಠ ಅವರ ನೇತೃತ್ವದಲ್ಲಿ ನಡೆಯಲಿದೆ. ಮಿಸ್ಟರ್ ಸೌಥ್ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು 18 ರಿಂದ 35ವಯೋಮಿತಿಯೊಳಗಿನ 5.7 ಅಡಿ ಮೇಲ್ಪಟ್ಟ ಎತ್ತರ ಇರುವ ಪುರುಷರು ಪಾಲ್ಗೊಳ್ಳಬಹುದು.
 
pratisevents@gmail.com   ತಮ್ಮ ವಿವರವನ್ನು ಕಳುಹಿಸಬಹುದು. ಅಥವಾ ನೇರವಾಗಿ ಪಾಲ್ಗೊಳ್ಳಲು ಅವಕಾಶವಿದೆ. ಪತ್ರಿಭಾ ಸಂಶಿಮಠ ಅವರಿಗೆ 9611455866 ದೂರವಾಣಿ ಮೂಲಕ ಸಂಪರ್ಕಿಸಿ ನಿಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಬಹುದು.
 
ರಾಷ್ಟ್ರೀಯ ಮಟ್ಟದಲ್ಲಿ ಮಿಸ್ಟರ್ ಇಂಡಿಯಾ ಆಯ್ಕೆ ಅಕ್ಟೋಬರ್ 25 ರಿಂದ 27 ರವರೆಗೆ ನಡೆಯಲಿದ್ದು, ಮ್ಯಾನ್ ಹಂಟ್ ಇಂಟರ್‌ನ್ಯಾಷನಲ್ ಆಯ್ಕೆಯು ನವೆಂಬರ್ 26 ರಿದ ಡಿಸೆಂಬರ್ 2 ರ ವರೆಗೆ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್ ನಲ್ಲಿ ನಡೆಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments