Select Your Language

Notifications

webdunia
webdunia
webdunia
webdunia

ಮಿಷನ್ 150: ವೇದಿಕೆಯಲ್ಲಿ ಸಾಲಾಗಿ ನಿದ್ದೆ ಹೊಡೆದ ಬಿಜೆಪಿ ನಾಯಕರು

ಮಿಷನ್ 150: ವೇದಿಕೆಯಲ್ಲಿ ಸಾಲಾಗಿ ನಿದ್ದೆ ಹೊಡೆದ ಬಿಜೆಪಿ ನಾಯಕರು
ಬೆಂಗಳೂರು , ಶನಿವಾರ, 16 ಸೆಪ್ಟಂಬರ್ 2017 (18:36 IST)
ಸಿಎಂ ಸಿದ್ದರಾಮಯ್ಯರನ್ನು ನಿದ್ದೆ ರಾಮಯ್ಯ ಎಂದು ಜರಿಯುತ್ತಿದ್ದ ಬಿಜೆಪಿ ನಾಯಕರು ಇಂದು ತಾವೇ ಸಭೆಯಲ್ಲಿ ನಿದ್ರೆಗೆ ಶರಣಾಗಿ ತಾವೇನು ಕಮ್ಮಿಯಿಲ್ಲ ಎನ್ನುವುದು ತೋರಿಸಿಕೊಟ್ಟಿದ್ದಾರೆ. ಬಿಜೆಪಿ ಸಭೆಯಲ್ಲಿ ವೇದಿಕೆಯ ಮೇಲಿದ್ದ ಬಿಜೆಪಿ ನಾಯಕರೆಲ್ಲ ಗಡದ್ದು ನಿದ್ದೆಗೆ ಮೊರೆಹೋದ ಘಟನೆ ವರದಿಯಾಗಿದೆ.
ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಚುನಾವಣೆ ಉಸ್ತುವಾರಿಗಳಾದ ಪ್ರಕಾಶ್ ಜಾವ್ಡೇಕರ್ ಮತ್ತು ಸಹ ಉಸ್ತುವಾರಿ ಪಿಯೂಷ್ ಗೋಯಲ್ ಪಾಲ್ಗೊಂಡಿದ್ದ ಸಭೆಯಲ್ಲಿ ಬಿಜೆಪಿ ನಾಯಕರು ಹೊಟ್ಟೆ ತುಂಬಾ ತಿಂದು ಗಡದ್ದು ನಿದ್ರೆಗೆ ಶರಣಾಗಿರುವುದು ಕಂಡು ಬಂದಿದೆ. 
 
ಬಿಜೆಪಿ ರಾಜ್ಯ ಚುನಾವಣೆ ಸಹ ಉಸ್ತುವಾರಿ ಪಿಯೂಷ್ ಗೋಯಲ್ ಸೇರಿದಂತೆ ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್ , ಗೋವಿಂದ ಕಾರಜೋಳ ಸೇರಿದಂತೆ ಇತರ ಮುಖಂಡರು ನಿದ್ದೆಯ ಮಂಪರಿನಲ್ಲಿ ಜಾರಿರುವುದು ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ.
 
ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ಪ್ರಕಾಶ್ ಜಾವ್ಜೇಕರ್, ಮುಂಬರುವ ಚುನಾವಣೆಯಲ್ಲಿ ಮಿಷನ್ 150 ನಮ್ಮ ಗುರಿಯಾಗಬೇಕು ಎಂದು ಕರೆ ನೀಡುತ್ತಿರುವಾಗ ಬಿಜೆಪಿ ನಾಯಕರು ವೇದಿಕೆಯಲ್ಲಿಯೇ ಸಾಲಾಗಿ ನಿದ್ರೆಗೆ ಜಾರಿರುವುದು ಬಹಿರಂಗವಾಯಿತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಕಚೇರಿಯಿಂದ ಎಸ್.ಎಂ. ಕೃಷ್ಣ ಫೋಟೋ ತೆಗೆದಿದ್ದಕ್ಕೆ ಗರಂ ಆದ ಪರಮೇಶ್ವರ್