Webdunia - Bharat's app for daily news and videos

Install App

ಲಂಚ ಕೇಳ್ತವ್ರೆ ಎಂದ್ರೆ ಅವರು ಹುಳ ಬಿದ್ದು ಸಾಯ್ತಾರೆ: ಜಮೀರ್ ಅಹ್ಮದ್ ಶಾಪ

Krishnaveni K
ಮಂಗಳವಾರ, 25 ಫೆಬ್ರವರಿ 2025 (15:18 IST)
ಬೆಂಗಳೂರು: ತಮ್ಮ ಇಲಾಖೆಯಲ್ಲಿ ಲಂಚ ಕೇಳ್ತಾರೆ ಎಂಬ ಆರೋಪಗಳಿಗೆ ವಸತಿ ಸಚಿವ ಜಮೀರ್ ಅಹ್ಮದ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು ಯಾರೇ ಲಂಚ ಕೇಳಿದ್ರೂ  ಹುಳ ಬಿದ್ದು ಸಾಯ್ತಾರೆ ಎಂದು ಶಾಪ ಹಾಕಿದ್ದಾರೆ.

ಮನೆ ವಿತರಣೆ ಮಾಡಲು ಅಧಿಕಾರಿಗಳು ವಸತಿ ಇಲಾಖೆಯಲ್ಲಿ ಲಂಚ ಕೇಳ್ತಿದ್ದಾರೆ ಎಂದು ಆರೋಪಗಳಿವೆ. ಈ ಬಗ್ಗೆ ಮಾಧ್ಯಮಗಳು ಇಂದು ಸಚಿವ ಜಮೀರ್ ಅಹ್ಮದ್ ಗಮನ ಸೆಳೆದರು. ನಿಮ್ಮ ಇಲಾಖೆಯಲ್ಲಿ ಮನೆ ಮಂಜೂರು ಮಾಡಿಕೊಡಲು ಲಂಚ ಕೇಳ್ತಿದ್ದಾರೆ ಎಂಬ ಆರೋಪಗಳಿವೆ ಸಾರ್ ಎಂದಿದ್ದಕ್ಕೆ ಜಮೀರ್ ಶಾಪ ಹಾಕಿದ್ದಾರೆ.

ನನ್ನನ್ನೂ ಸೇರಿಸಿ ಯಾರೇ ಲಂಚ ಕೇಳಿದ್ರೂ ಅವರು ಹುಳ ಬಿದ್ದು ಸಾಯ್ತಾರೆ ಎಂದು ಹಿಡಿಶಾಪ ಹಾಕಿದ್ದಾರೆ. ಆಶ್ರಯ ಮನೆ ಮಂಜೂರು ಮಾಡಲು ಪ್ರತೀ ಮನೆಗೆ 50 ಸಾವಿರ ರೂ. ಗಳಂತೆ ಲಂಚ ಕೇಳ್ತಿದ್ದಾರೆ ಎಂದು ಆರೋಪಗಳಿವೆ ಎಂದು ಸಚಿವರ ಗಮನ ಸೆಳೆಯಲಾಯಿತು.

‘ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಮನೆಗಳು ಸಾಂಕ್ಷನ್ ಆಗಿತ್ತು. ಅದನ್ನೆಲ್ಲಾ ಈಗ ಮಂಜೂರು ಮಾಡ್ತಾ ಇದ್ದೇವೆ. ಲಾಟರಿ ಮೂಲಕ ಅರ್ಹರಿಗೆ ಮನೆ ಕೊಡ್ತಿದ್ದಾರೆ. ಒಂದು ವೇಳೆ ಯಾರಾದ್ರೂ ಲಂಚ ತೆಗೆದುಕೊಳ್ತಾರೆ ಎಂದು ಅವರ ಮಕ್ಕಳಿಗೆ ಒಳ್ಳೆಯದಾಗಲ್ಲ, ಹುಳ ಬಿದ್ದು ಸಾಯ್ತಾರೆ ಎಂದಷ್ಟೇ ಹೇಳಲು ಬಯಸ್ತೀನಿ’ ಎಂದು ಜಮೀರ್ ಶಾಪ ಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bappanadu Viral Video: ಬಪ್ಪನಾಡು ದುರ್ಗಾಪರಮೇಶ್ವರಿ ರಥ ಏಕಾಏಕಿ ಕುಸಿತ: ಮೇಲಿದ್ದ ಅರ್ಚಕರನ್ನು ದೇವಿಯೇ ಕಾಪಾಡಿದ್ಳು

Kannada Viral Video: ಬೆಂಗಳೂರಲ್ಲಿ ಬದುಕಬೇಕೆಂದರೆ ಹಿಂದಿ ಕಲಿ: ಕನ್ನಡಿಗ ಆಟೋ ಚಾಲಕನಿಗೆ ಹಿಂದಿವಾಲ ಧಮ್ಕಿ

Arecanut price today: ಅಡಿಕೆಗೂ ಇಲ್ಲ, ಕಾಳುಮೆಣಸಿಗೂ ಇಲ್ಲ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

DK Shivakumar: ಡಿಕೆ ಶಿವಕುಮಾರ್ ಭೇಟಿಯಾದ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ: ವಿವಾದ ಮಾಡ್ಬೇಡಿ ಎಂದು ರಿಕ್ವೆಸ್ಟ್

Tiger viral video: ಹೆಬ್ಬಾವನ್ನೇ ತಿನ್ನಲು ಹೋದ ಹುಲಿ ಸಂಕಟ ಹೇಳತೀರದು

ಮುಂದಿನ ಸುದ್ದಿ
Show comments