Webdunia - Bharat's app for daily news and videos

Install App

ಲಂಚ ಕೇಳ್ತವ್ರೆ ಎಂದ್ರೆ ಅವರು ಹುಳ ಬಿದ್ದು ಸಾಯ್ತಾರೆ: ಜಮೀರ್ ಅಹ್ಮದ್ ಶಾಪ

Krishnaveni K
ಮಂಗಳವಾರ, 25 ಫೆಬ್ರವರಿ 2025 (15:18 IST)
ಬೆಂಗಳೂರು: ತಮ್ಮ ಇಲಾಖೆಯಲ್ಲಿ ಲಂಚ ಕೇಳ್ತಾರೆ ಎಂಬ ಆರೋಪಗಳಿಗೆ ವಸತಿ ಸಚಿವ ಜಮೀರ್ ಅಹ್ಮದ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು ಯಾರೇ ಲಂಚ ಕೇಳಿದ್ರೂ  ಹುಳ ಬಿದ್ದು ಸಾಯ್ತಾರೆ ಎಂದು ಶಾಪ ಹಾಕಿದ್ದಾರೆ.

ಮನೆ ವಿತರಣೆ ಮಾಡಲು ಅಧಿಕಾರಿಗಳು ವಸತಿ ಇಲಾಖೆಯಲ್ಲಿ ಲಂಚ ಕೇಳ್ತಿದ್ದಾರೆ ಎಂದು ಆರೋಪಗಳಿವೆ. ಈ ಬಗ್ಗೆ ಮಾಧ್ಯಮಗಳು ಇಂದು ಸಚಿವ ಜಮೀರ್ ಅಹ್ಮದ್ ಗಮನ ಸೆಳೆದರು. ನಿಮ್ಮ ಇಲಾಖೆಯಲ್ಲಿ ಮನೆ ಮಂಜೂರು ಮಾಡಿಕೊಡಲು ಲಂಚ ಕೇಳ್ತಿದ್ದಾರೆ ಎಂಬ ಆರೋಪಗಳಿವೆ ಸಾರ್ ಎಂದಿದ್ದಕ್ಕೆ ಜಮೀರ್ ಶಾಪ ಹಾಕಿದ್ದಾರೆ.

ನನ್ನನ್ನೂ ಸೇರಿಸಿ ಯಾರೇ ಲಂಚ ಕೇಳಿದ್ರೂ ಅವರು ಹುಳ ಬಿದ್ದು ಸಾಯ್ತಾರೆ ಎಂದು ಹಿಡಿಶಾಪ ಹಾಕಿದ್ದಾರೆ. ಆಶ್ರಯ ಮನೆ ಮಂಜೂರು ಮಾಡಲು ಪ್ರತೀ ಮನೆಗೆ 50 ಸಾವಿರ ರೂ. ಗಳಂತೆ ಲಂಚ ಕೇಳ್ತಿದ್ದಾರೆ ಎಂದು ಆರೋಪಗಳಿವೆ ಎಂದು ಸಚಿವರ ಗಮನ ಸೆಳೆಯಲಾಯಿತು.

‘ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಮನೆಗಳು ಸಾಂಕ್ಷನ್ ಆಗಿತ್ತು. ಅದನ್ನೆಲ್ಲಾ ಈಗ ಮಂಜೂರು ಮಾಡ್ತಾ ಇದ್ದೇವೆ. ಲಾಟರಿ ಮೂಲಕ ಅರ್ಹರಿಗೆ ಮನೆ ಕೊಡ್ತಿದ್ದಾರೆ. ಒಂದು ವೇಳೆ ಯಾರಾದ್ರೂ ಲಂಚ ತೆಗೆದುಕೊಳ್ತಾರೆ ಎಂದು ಅವರ ಮಕ್ಕಳಿಗೆ ಒಳ್ಳೆಯದಾಗಲ್ಲ, ಹುಳ ಬಿದ್ದು ಸಾಯ್ತಾರೆ ಎಂದಷ್ಟೇ ಹೇಳಲು ಬಯಸ್ತೀನಿ’ ಎಂದು ಜಮೀರ್ ಶಾಪ ಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments