Select Your Language

Notifications

webdunia
webdunia
webdunia
webdunia

ಕಾಶಿ ಯಾತ್ರೆ ರೈಲು ಪ್ರವಾಸಕ್ಕೆ ಸಚಿವ ರಾಮಲಿಂಗರೆಡ್ಡಿ ಚಾಲನೆ

ಕಾಶಿ ಯಾತ್ರೆ ರೈಲು ಪ್ರವಾಸಕ್ಕೆ ಸಚಿವ ರಾಮಲಿಂಗರೆಡ್ಡಿ ಚಾಲನೆ
bangalore , ಶನಿವಾರ, 29 ಜುಲೈ 2023 (21:00 IST)
ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟ ಭಾರತ್‌ ಗೌರವ್‌ ೪ನೇ ಕಾಶಿಯಾತ್ರೆ ಟ್ರೈನ್ ಗೆ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗರೆಡ್ಡಿ ಇಂದು ಚಾಲನೆ ನೀಡಿದ್ರು. ಇದು ರಾಜ್ಯ ಸರ್ಕಾರದ ಕಾಶಿಯಾತ್ರೆಯಾಗಿದ್ದು, ಈ ಹಿಂದೆ ಮೂರು ಟ್ರಿಪ್ ಆಗಿದ್ದು, ಇದು ನಾಲ್ಕನೇ ಟ್ರಿಪ್ ಆಗಿದೆ.ಇನ್ನು ಯಶವಂತಪುರ ರೈಲು ನಿಲ್ದಾಣದಿಂದ ಕಾಶಿಗೆ ಒಟ್ಟು 403 ಪ್ರಯಾಣಿಕರನ್ನ ರೈಲು ಹೊತ್ತು ಸಾಗಿತು. 20 ಸಾವಿರ ರೂಪಾಯಿಗಳ ಪ್ಯಾಕೇಜ್‌ ಪ್ರವಾಸ ಯೋಜನೆ ಇದಾಗಿದ್ದು, 5 ಸಾವಿರ ರೂಪಾಯಿಗಳನ್ನು ರಾಜ್ಯ ಸರಕಾರ ಭರಿಸಲಿದೆ. 15,000 ರೂಪಾಯಿಗಳನ್ನು ಯಾತ್ರಾರ್ಥಿಗಳು ಪಾವತಿಸಬೇಕಾಗಿದೆ. ವಿಶೇಷ ರೈಲಿನಲ್ಲಿ ತೆರಳುವ ಯಾತ್ರಾರ್ಥಿಗಳಿಗೆ ಉಪಾಹಾರ, ಊಟ, ತಂಗುವಿಕೆ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆ ಸೌಲಭ್ಯಗಳನ್ನು ನೀಡಲಾಗಿದೆ. ಇದು 8 ದಿನಗಳ ಪ್ರವಾಸವಾಗಿದ್ದು, ಆರೋಗ್ಯ ಇಲಾಖೆಯ ಇಬ್ಬರು ವೈದ್ಯರು ಈ ರೈಲಿನಲ್ಲಿದ್ರು. ಇನ್ನು ರಾಜ್ಯ ಸರ್ಕಾರದ ವೆಚ್ಚದಲ್ಲಿಯೇ ಪ್ರತ್ಯೇಕ ಬೋಗಿಗಳನ್ನ ತಯಾರಿಸಲಾಗಿದ್ದು, ಆಗಸ್ಟ್  ೧೫ ಕ್ಕೆ ೫ ನೇ ಯಾತ್ರೆ ಶುರುವಾಗಲಿದೆ ಅಂತ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿಟಿ ರವಿ ಔಟ್