ಇಂದಿರಾ ಕ್ಯಾಂಟೀನ್ ಗೆ ಬಂದ ಸಚಿವ ರಹೀಂ ಖಾನ್ ಮೆಚ್ಚಿಸಲು ಹೋಟೆಲ್ ಊಟ: ವಿವಾದ

Krishnaveni K
ಮಂಗಳವಾರ, 26 ನವೆಂಬರ್ 2024 (10:26 IST)
ಬೆಂಗಳೂರು: ಸಚಿವರು ಸಮೀಕ್ಷೆಗೆ ಬರುತ್ತಾರೆ ಎಂದರೆ ಅಧಿಕಾರಿಗಳು ಗಡಿಬಿಡಿಯಲ್ಲಿ ನ್ಯೂನ್ಯತೆಗಳೇ ಕಾಣದಂತೆ ಆ ಸ್ಥಳವನ್ನು ರೆಡಿ ಮಾಡಿಸುವುದು ಸಾಮಾನ್ಯ. ಅದೇ ರೀತಿ ಸಚಿವ ರಹೀಂ ಖಾನ್ ಮೆಚ್ಚಿಸಲು ಇಂದಿರಾ ಕ್ಯಾಂಟೀನ್ ಗೆ ಹೋಟೆಲ್ ಊಟ ತರಿಸಿ ಈಗ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪೌರಾಡಳಿತ ಸಚಿವ ರಹೀಂ ಖಾನ್ ಕ್ಯಾಂಟೀನ್ ಪರಿಶೀಲನೆಗೆ ಬಂದಾಗ ಊಟ ನೀಡಲಾಗಿತ್ತು. ಸಚಿವರು ಬರುತ್ತಾರೆ ಎಂದು ಎರಡು ದಿನ ಮೊದಲೇ ಮಾಹಿತಿಯಿತ್ತು. ಈ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ತೊಳೆದು ಶುಭ್ರಮವಾಗಿಟ್ಟುಕೊಳ್ಳಲಾಗಿತ್ತು. ಇದರ ಜೊತೆಗೆ ರುಚಿಕರವಾದ ಊಟವನ್ನೂ ನೀಡಲಾಗಿತ್ತು.

ಆದರೆ ಸಚಿವರು ಊಟ ಮಾಡಲು ಹೋಟೆಲ್ ನಿಂದ ಊಟ ತರಿಸಲಾಗಿತ್ತು ಎಂಬ ಅಪವಾದ ಕೇಳಿಬಂದಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ರಹೀಂ ಖಾನ್ ನನಗೂ ಊಟದ ಬಗ್ಗೆ ಅನುಮಾನ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.

ಇಂದಿರಾ ಕ್ಯಾಂಟೀನ್ ಎಂದು ಸಚಿವರಿಗೆ ಹೋಟೆಲ್ ಊಟ ತರಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಸಚಿವರು ಊಟ ಮಾಡಿ ಹೋದ ಮೇಲೆ ವಿವಾದವಾಗಿದೆ. ಇಂದಿರಾ ಕ್ಯಾಂಟೀನ್ ಊಟದ ಗುಣಮಟ್ಟ ಪರಿಶೀಲನೆಗೆಂದೇ ಸಚಿವರು ಬಂದಿದ್ದರು. ಆದರೆ ಈ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ಊಟವನ್ನೇ ಕೊಡದೇ ಹೋಟೆಲ್ ಊಟ ನೀಡಿದರೆ ಸಚಿವರ ಭೇಟಿಯ ಉದ್ದೇಶಕ್ಕೆ ಏನು ಬೆಲೆ ಬಂದಂತಾಯಿತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲ್ಲ: ಮಲ್ಲಿಕಾರ್ಜುನ ಖರ್ಗೆ ಹಿಂಗದಿದ್ಯಾಕೆ

ದೇಶದ ಎರಡನೇ ಅತಿದೊಡ್ಡ ಮೀನು ಉತ್ಪಾದನಾ ರಾಜ್ಯವಾಗಿ ಗುಜರಾತ್

ಶಾಸಕರ ಖರೀದಿಗೆ ಹಣವಿದೆ, ರೈತರ ಸಂಕಷ್ಟಕ್ಕಿಲ್ಲ: ಜಗದೀಶ್ ಶೆಟ್ಟರ್ ಆಕ್ರೋಶ

ತಾತ್ಕಾಲಿಕ ಸಿಎಂ ಬೇಡ, ರೈತರ ಸಮಸ್ಯೆಗೆ ಸ್ಪಂದಿಸುವ ಮುಖ್ಯಮಂತ್ರಿ ಬೇಕು: ಬಿವೈ ವಿಜಯೇಂದ್ರ

ದಾವಣಗೆರೆ: ಮೀನಿನ ಆಸೆಗೆ ಜೀವ ಕಳೆದುಕೊಂಡ್ರಾ ಇಬ್ಬರು ಯುವಕರು, ಏನಿದು ಘಟನೆ

ಮುಂದಿನ ಸುದ್ದಿ
Show comments