Publish Date: Sun, 06 Oct 2019 (19:02 IST)
Updated Date: Sun, 06 Oct 2019 (19:04 IST)
ಸಾರಿಗೆ ಸಚಿವ ಹಾಗೂ ಡಿಸಿಎಂ ಮತಕ್ಷೇತ್ರದಲ್ಲಿ ಈ ವಿಷಯದಲ್ಲಿ ಅವ್ಯವಸ್ಥೆ ಜನರ ಕಣ್ಣಿಗೆ ರಾಚುತ್ತಿದೆ.
ಸಾರಿಗೆ ಸಚಿವರೇ ಸ್ವಲ್ಪ ಇತ್ತ ನೋಡಿ ಅಂತ ಜನರು ಕೇಳ್ತಿದ್ದಾರೆ. ಯಾಕಂದ್ರೆ, ಬೆಳಗಾವಿ ಜಿಲ್ಲೆ ಅಥಣಿ ಬಸ್ ಗಳ ದುಸ್ಥಿತಿ ಪ್ರಯಾಣಿಕರನ್ನ ಹೈರಾಣಾಗಿಸುತ್ತಿದೆ.
ಸಾರಿಗೆ ಸಚಿವ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಕೆಟ್ಟು ನಿಲ್ಲುತ್ತಿವೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳು.
ಪ್ರಯಾಣಿಕರಿಗೆ ನಿತ್ಯವೂ ತಳ್ಳು, ನೂಕು, ಐಸಾ ಅನ್ನೋದು ತಪ್ಪುತ್ತಿಲ್ಲ.
ಸರ್ಕಾರಿ ಬಸ್ಸು ಹತ್ತಿದರೆ ಅರ್ಧ ದಾರಿಯಲ್ಲಿ ಇಳಿದು ಅದನ್ನ ಪ್ರಯಾಣಿಕರೇ ತಳ್ಳಬೇಕು. ಬಸ್ಸುಗಳು ಸರಿ ಇಲ್ಲದ ಕಾರಣಕ್ಕೆ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ ಪ್ರಯಾಣಿಕರು. ಸಚಿವಕರು ಕಾರು ಇಳಿದು ಬಸ್ ನಲ್ಲಿ ಓಡಾಡುತ್ತಿದ್ದರೆ ನಮ್ಮ ಪರಿಸ್ಥಿತಿ ಗೊತ್ತಾಗುತ್ತಿತ್ತು ಅಂತ ಜನರು ದೂರುತ್ತಿದ್ದಾರೆ.