Select Your Language

Notifications

webdunia
webdunia
webdunia
webdunia

ಕನ್ನಡ ಮಾತಾಡಕ್ಕೆ ಬರುತ್ತೆ, ಬರಿಯೋದು ಕಷ್ಟ: ಒಪ್ಪಿಕೊಂಡು ಶಿಕ್ಷಣ ಸಚಿವ ಮಧು ಬಂಗಾರಪ್ಪ Video

Minister Madhu Bangarappa
Photo Credit X
ಬೆಂಗಳೂರು: ಕನ್ನಡ ಮಾತಾಡಕ್ಕೆ ಬರುತ್ತೆ, ಬರಿಯೋದು ಕಷ್ಟ ಎಂದು  ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಮಧು ಬಂಗಾರಪ್ಪ ಅವರು ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂದು ಹೇಳುವ ಮೂಲಕ ಟೀಕೆಗೆ ಗುರಿಯಾಗಿದ್ದರು. 

ಇನ್ನೂ ಈ ಹೇಳಿಕೆ ಬಳಿಕ ಆನ್‌ಲೈನ್‌ ಸಂವಾದವೊಂದರಲ್ಲಿ ವಿದ್ಯಾರ್ಥಿಯೊಬ್ಬ ವಿದ್ಯಾಮಂತ್ರಿಗೆ ಕನ್ನಡ ಬರಲ್ಲ ಎಂದು ಹೇಳಿದಾಗ ಭಾರೀ ವಿವಾದ ಸೃಷ್ಟಿಯಾಗಿತ್ತು. ಶಿಕ್ಷಣ ಸಚಿವರಿಗೆ ಈ ಘಟನೆ ಭಾರೀ ಮುಜುಗರ ಉಂಟು ಮಾಡಿತ್ತು.  ಇನ್ನೂ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೂ ಸೂಚಿಸಿದ್ದರು.

ಇದೀಗ ಇಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡುವಾಗ ನನಗೆ ಕನ್ನಡ ಓದಲು ಬರುತ್ತೆ, ಬರೆಯಲು ಬರಲ್ಲ ಎಂದು ಹೇಳುವ ಮೂಲಕ ಒಪ್ಪಿಕೊಂಡಿದ್ದಾರೆ. 

ಇದು ಶಿಕ್ಷಣ ಸಚಿವರ ಈ ಹೇಳಿಕೆಗೆ ಇದೀಗ ವಿಧವಿಧವಾದ ಕಮೆಂಟ್ಸ್ ಬರುತ್ತಿದೆ. ಒಬ್ಬರು ಶಿಕ್ಷಣ ಸಚಿವ, ಮಾಜಿ ಮುಖ್ಯಮಂತ್ರಿ ಮಗ, ಕನ್ನಡ ಕಡ್ಡಾಯ ಮಾಡಿದ್ದು ಯಾಕೇ..? ಕನ್ನಡ ಸಂಘಟನೆಗಳು ಯಾರ ಮೇಲೂ ಹೋರಾಟ ಮಾಡುವ ಯೋಗ್ಯತೆ ಇಲ್ಲ ಎಂದು ಬರೆದುಕೊಂಡಿದ್ದಾರೆ.
 
 
 
 
 
 
 
 
 
 
 
 
 
 
 

A post shared by Prathinidhi News (@prathinidhinews)


Share this Story:

Follow Webdunia kannada

ಮುಂದಿನ ಸುದ್ದಿ

ಭಟ್ಕಳದಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಜಲಸಮಾಧಿ: ಮತ್ತಿಬ್ಬರು ನಾಪತ್ತೆ