Select Your Language

Notifications

webdunia
webdunia
webdunia
webdunia

ಬ್ರಿಟಿಷರ ಗುಂಡಿಗೆ ಹೆದರದವರು ನಾವು, ಬಿಜೆಪಿಯವರಿಗೆ ಹೆದರ್ತೀವಾ: ಸಚಿವ ಕೆಜೆ ಜಾರ್ಜ್

KJ George

Krishnaveni K

ಬೆಂಗಳೂರು , ಗುರುವಾರ, 18 ಜುಲೈ 2024 (11:42 IST)
ಬೆಂಗಳೂರು: ಬ್ರಿಟಿಷರ ಗುಂಡಿಗೇ ಹೆದರದ ಪಕ್ಷದವರು ನಾವು, ಇನ್ನು ಬಿಜೆಪಿಯವರ ಕುತಂತ್ರಗಳಿಗೆಲ್ಲಾ ಹೆದರುತ್ತೇವಾ? ಎಂದು ಇಂಧನ ಇಲಾಖೆ ಸಚಿವ ಕೆಜೆ ಜಾರ್ಜ್ ಪ್ರಶ್ನೆ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಪ್ರತಿಭಟನೆ ವಿರುದ್ಧ ಆಕ್ರೋಶ ಹೊರಹಾಕಿದರು.

ವಾಲ್ಮೀಕಿ ಹಗರವನ್ನು ಮುಂದಿಟ್ಟುಕೊಂಡು ಬಿಜೆಪಿ ಸದನದ ಹೊರಗೆ ಮತ್ತು ಒಳಗೆ ಭಾರೀ ಪ್ರತಿಭಟನೆ ನಡೆಸುತ್ತಿದೆ. ಸದನದ ಒಳಗೆ ವಿಪಕ್ಷ ನಾಯಕ ಆರ್ ಅಶೋಕ್ ಆದಿಯಾಗಿ ಎಲ್ಲರೂ ಇದೇ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕಳೆದ ಎರಡೂ ದಿನವೂ ಸದನದಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ.

ಇದು ಇಷ್ಟಕ್ಕೇ ನಿಂತಿಲ್ಲ. ಸದನ ಹೊರಗೂ ಬಿಜೆಪಿ ಭಾರೀ ಪ್ರತಿಭಟನೆ ನಡೆಸುತ್ತಿದೆ. ಇಂದೂ ಕೂಡಾ ಫ್ರಿಡಂ ಪಾರ್ಕ್ ನಲ್ಲಿ ಆರ್ ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಈ ಬಗ್ಗೆ ಸಚಿವ ಕೆಜೆ ಜಾರ್ಜ್ ಬಳಿ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಬಿಜೆಪಿಯವರ ಕುತಂತ್ರಕ್ಕೆಲ್ಲಾ ನಾವು ಹೆದರಲ್ಲ ಎಂದಿದ್ದಾರೆ.

‘ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿಗೆ ಬೇರೆ ಪಕ್ಷಗಳ ಸಹಾಯ ಬೇಕಾಯಿತು. ಬ್ರಿಟಿಷರ ಗುಂಡಿಗೆ ಹೆದರದವರು ನಾವು. ಇವರ ಕುತಂತ್ರಕ್ಕೆಲ್ಲಾ ಹೆದರಲ್ಲ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಸಿಎಂ ಸಿದ್ದರಾಮಯ್ಯ ಹೊಸ ಟ್ವೀಟ್