Select Your Language

Notifications

webdunia
webdunia
webdunia
webdunia

ನಾಪತ್ತೆಯಾದ ಮೀನುಗಾರರನ್ನು ಹುಡುಕಿ ಕೊಡುವಂತೆ ಸೇನೆಗೆ ಪತ್ರ ಬರೆದ ಸಚಿವೆ ಜಯಮಾಲ

ನಾಪತ್ತೆಯಾದ ಮೀನುಗಾರರನ್ನು ಹುಡುಕಿ ಕೊಡುವಂತೆ ಸೇನೆಗೆ ಪತ್ರ ಬರೆದ ಸಚಿವೆ ಜಯಮಾಲ
ಉಡುಪಿ , ಭಾನುವಾರ, 6 ಜನವರಿ 2019 (07:48 IST)
ಉಡುಪಿ : ಮಲ್ಪೆ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಹಿತ ಮೀನೂಗಾರರು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಡಾ.ಜಯಮಾಲ ಮೀನೂಗಾರರನ್ನು ಹುಡುಕಿ ಕೊಡುವಂತೆ ಸೇನೆಗೆ ಪತ್ರ ಬರೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಮಲ್ಪೆ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಹಿತ ನಾಪತ್ತೆಯಾಗಿರುವ 7 ಮಂದಿ ಮೀನುಗಾರರ ಮನೆಗೆ ಶನಿವಾರ ಸಚಿವೆ ಡಾ.ಜಯಮಾಲ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ಹೇಳಿದ್ದಾರೆ. ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,’ ಮಲ್ಫೆ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಹಿತ ನಾಪತ್ತೆಯಾಗಿರುವ 7 ಮಂದಿ ಮೀನುಗಾರರ ಪತ್ತೆಗೆ ಸೇನೆಗೆ ಪತ್ರ ಬರೆದು ಹುಡುಕಾಟ ನಡೆಸುವಂತೆ ಕೇಳಿಕೊಂಡಿದ್ದೇವೆ’ ಎಂದು ಹೇಳಿದ್ದಾರೆ.


‘ಬೋಟ್ ಅವಘಡವಾಗಿದ್ದರೆ ಡೀಸೆಲ್ ಕುರುವು ಸಿಗುತ್ತಿತ್ತು. ಡೀಸೆಲ್ ಕೊರತೆಯೂ ಇಲ್ಲ ಎಂದಿದ್ದಾರೆ. ಅವರನ್ನು ಯಾರಾದರೂ ಒತ್ತೆ ಇಟ್ಟುಕೊಂಡಿದ್ದರೆ ಸುರಕ್ಷಿತವಾಗಿ ಬಿಡಿಸಿಕೊಂಡು ಬರುವಂತೆ ಸಿಎಂ ಮೂಲಕ ಸೇನೆಗೆ ಕೇಳಿಕೊಳ್ಳಲಾಗಿದೆ ‘ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನ ಜೊತೆ ಸುತ್ತಾಡಲು ಬಂದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಸಿದ 70ರ ಮುದಿಯ