Publish Date: Sat, 05 Oct 2019 (18:21 IST)
Updated Date: Sat, 05 Oct 2019 (18:23 IST)
ನಾನು ಯಾರು ಅಂತ ಕರ್ನಾಟಕಕ್ಕೆ ಗೊತ್ತು. ಆದರೆ ನಿಮಗೆ ನಾನ್ಯಾರು ಅಂತ ಗೊತ್ತಿಲ್ವಾ? ಹೀಗಂತ ಅಧಿಕಾರಿಗಳಿಗೆ ಸಚಿವರು ನೀರಿಳಿಸಿದ ಘಟನೆ ನಡೆದಿದೆ.
ಜಿಲ್ಲಾ ಉಸ್ತುವಾರಿ ಸಚಿವರನ್ನೇ ಜೆಸ್ಕಾಂ ಅಧಿಕಾರಿ ಗುರುತಿಸದ ಘಟನೆ ನಡೆದಿದೆ.
ಸಚಿವರಿಗೇ ನೀವ್ಯಾರು ಅಂತಾ ಗೊತ್ತಿಲ್ಲವೆಂದ ಜೆಸ್ಕಾಂ ಅಧಿಕಾರಿ ಎಡವಟ್ಟು ಮಾಡಿಕೊಂಡಿದ್ದಾರೆ.
ಯಾದಗಿರಿ ಜೆಸ್ಕಾಂ ಕಚೇರಿಗೆ ದಿಢೀರ್ ಭೇಟಿ ನೀಡಿದ್ದ ವೇಳೆ ಅಧಿಕಾರಿಗಳಿಗೆ ಶಾಕ್ ಕಾದಿತ್ತು.
ಯಾದಗಿರಿಯ ಜೆಸ್ಕಾಂ ಕಚೇರಿಗೆ ದಿಢೀರ್ ಭೇಟಿ ನೀಡಿ ಜೆಸ್ಕಾಂ ಎಇ ಛೇಂಬರ್ ಪ್ರವೇಶಿಸಿದ್ದರು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ.
ಈ ವೇಳೆ ಅಧಿಕಾರಿಗೆ ನಾನ್ಯಾರು ಅಂತಾ ಗೊತ್ತಾ? ಎಂದು ಪ್ರಶ್ನಿಸಿದ್ದಾರೆ ಸಚಿವರು.
ಆದರೆ ಸಚಿವರ ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ ಜೆಸ್ಕಾಂ ಅಧಿಕಾರಿ.
ನಾನ್ಯಾರು ಅಂತಾ ಕರ್ನಾಟಕಕ್ಕೆ ಗೊತ್ತು. ನಿಮಗೆ ಗೊತ್ತಿಲ್ವಾ..? ಹೀಗಂತ ಅಧಿಕಾರಿಗಳ ವಿರುದ್ಧ ಸಚಿವ ಪ್ರಭು ಚವ್ಹಾಣ ಗರಂ ಆದ ಘಟನೆ ನಡೆಯಿತು.