Select Your Language

Notifications

webdunia
webdunia
webdunia
webdunia

ನಾನು ಇಡೀ ರಾಜ್ಯಕ್ಕೆ ಗೊತ್ತು - ನಿಮಗೆ ಗೊತ್ತಿಲ್ವಾ ಅಂತ ಅಧಿಕಾರಿ ವಿರುದ್ಧ ಗರಂ ಆದ ಸಚಿವ

ನಾನು ಇಡೀ ರಾಜ್ಯಕ್ಕೆ ಗೊತ್ತು - ನಿಮಗೆ ಗೊತ್ತಿಲ್ವಾ ಅಂತ ಅಧಿಕಾರಿ ವಿರುದ್ಧ ಗರಂ ಆದ ಸಚಿವ
ಯಾದಗಿರಿ , ಶನಿವಾರ, 5 ಅಕ್ಟೋಬರ್ 2019 (18:21 IST)
ನಾನು ಯಾರು ಅಂತ ಕರ್ನಾಟಕಕ್ಕೆ ಗೊತ್ತು. ಆದರೆ ನಿಮಗೆ ನಾನ್ಯಾರು ಅಂತ ಗೊತ್ತಿಲ್ವಾ? ಹೀಗಂತ ಅಧಿಕಾರಿಗಳಿಗೆ ಸಚಿವರು ನೀರಿಳಿಸಿದ ಘಟನೆ ನಡೆದಿದೆ.

ಜಿಲ್ಲಾ ಉಸ್ತುವಾರಿ ಸಚಿವರನ್ನೇ ಜೆಸ್ಕಾಂ ಅಧಿಕಾರಿ ಗುರುತಿಸದ ಘಟನೆ ನಡೆದಿದೆ.

ಸಚಿವರಿಗೇ ನೀವ್ಯಾರು ಅಂತಾ ಗೊತ್ತಿಲ್ಲವೆಂದ ಜೆಸ್ಕಾಂ ಅಧಿಕಾರಿ ಎಡವಟ್ಟು ಮಾಡಿಕೊಂಡಿದ್ದಾರೆ.
ಯಾದಗಿರಿ ಜೆಸ್ಕಾಂ ಕಚೇರಿಗೆ ದಿಢೀರ್ ಭೇಟಿ ನೀಡಿದ್ದ ವೇಳೆ ಅಧಿಕಾರಿಗಳಿಗೆ ಶಾಕ್ ಕಾದಿತ್ತು.
ಯಾದಗಿರಿಯ ಜೆಸ್ಕಾಂ ಕಚೇರಿಗೆ ದಿಢೀರ್ ಭೇಟಿ ನೀಡಿ ಜೆಸ್ಕಾಂ ಎಇ  ಛೇಂಬರ್ ಪ್ರವೇಶಿಸಿದ್ದರು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ.

ಈ ವೇಳೆ ಅಧಿಕಾರಿಗೆ ನಾನ್ಯಾರು ಅಂತಾ ಗೊತ್ತಾ? ಎಂದು ಪ್ರಶ್ನಿಸಿದ್ದಾರೆ ಸಚಿವರು.

ಆದರೆ ಸಚಿವರ ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ ಜೆಸ್ಕಾಂ ಅಧಿಕಾರಿ.

ನಾನ್ಯಾರು ಅಂತಾ ಕರ್ನಾಟಕಕ್ಕೆ ಗೊತ್ತು. ನಿಮಗೆ ಗೊತ್ತಿಲ್ವಾ..? ಹೀಗಂತ ಅಧಿಕಾರಿಗಳ ವಿರುದ್ಧ ಸಚಿವ ಪ್ರಭು ಚವ್ಹಾಣ ಗರಂ ಆದ ಘಟನೆ ನಡೆಯಿತು.



Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಗೆ ಘೇರಾವ್ : ಕಾಂಗ್ರೆಸ್ ಮುಖಂಡರು ಅರೆಸ್ಟ್