Select Your Language

Notifications

webdunia
webdunia
webdunia
webdunia

ಕೊರೊನಾ ಚಿಕಿತ್ಸೆಗೆ ನೋ ಎಂದರೆ ಕಾನೂನು ಕ್ರಮ ಖಚಿತ ಎಂದ ಸಚಿವ

ಕೊರೊನಾ ಚಿಕಿತ್ಸೆಗೆ ನೋ ಎಂದರೆ ಕಾನೂನು ಕ್ರಮ ಖಚಿತ ಎಂದ ಸಚಿವ
ಬೆಂಗಳೂರು , ಭಾನುವಾರ, 15 ಮಾರ್ಚ್ 2020 (17:45 IST)
ಕೊರೊನಾ ವೈರಸ್ ಹಿನ್ನಲೆ ಆರೋಗ್ಯ ಸಚಿವ ಶ್ರೀರಾಮಲು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೆ ವೇಳೆ ಮಾತನಾಡಿದ ಅವರು, ರಾಜ್ಯದ ಜನರು ಭಯ ಪಡುವುದು ಬೇಡ. ಈಗಾಗಲೇ ಕೊರೊನಾ ವೈರಸ್ ನಿಂದ 63 ಸಾವಿರ ಜನರು ಗುಣ ಮುಖರಾಗಿದ್ದಾರೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಕ್ರಮ ಕೈಗೊಂಡಿದೆ.‌‌ ಮೃತನ ಕುಟುಂಬಸ್ಥರ ಮೂವರ ರಿಪೋರ್ಟ್ ನೆಗೆಟಿವ್ ಬಂದಿದೆ. ಇಂದು ಸಂಜೆ ಮತ್ತೊಬ್ಬರ ವರದಿ ಬರಲಿದೆ. ರಿಪೋರ್ಟ್ ನೆಗೆಟಿವ್ ಅಥವಾ ಪಾಸಿಟಿವ್ ಏನೇ ಬಂದರೂ ಜನ ಭಯ ಭೀತರಾಗೊದು ಬೇಡ ಎಂದರು.

ಕೊರೊನಾ ವೈರಸ್ ತಡೆಗಟ್ಟಲು ಸಿಎಂ ಬಿ.ಎಸ್. ಯಡಿಯೂರಪ್ಪನವರು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದ್ದಾರೆ. ಜಿಲ್ಲೆಗೆ ವಿದೇಶದಿಂದ 16  ಜನ ಬಂದಿದ್ದಾರೆ. ಅವರನ್ನು ಹೊಮ್ ಐಸೋಲೇಷನ್ ನಲ್ಲಿ ಇಟ್ಟು ನಿಗಾ ವಹಿಸಲಾಗುತ್ತಿದೆ. ವಿದೇಶದಿಂದ ಬಂದವರು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಯಾರಾದರೂ ತಪಾಸಣೆ ಮಾಡಿಸಿಕೊಳ್ಳಲು ಹಿಂದೇಟು ಹಾಕಿದರೆ  ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶ್ರೀರಾಮುಲು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಭೀತಿ : ಇಟಲಿ, ಇರಾನ್ ನಲ್ಲಿದ್ದ ಭಾರತೀಯರು ವಾಪಸ್