Publish Date: Tue, 18 Sep 2018 (16:44 IST)
Updated Date: Tue, 18 Sep 2018 (16:47 IST)
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ ಯಿಂದ ಎಫ್.ಐ.ಆರ್. ದಾಖಲು ಹಿನ್ನಲೆಯಲ್ಲಿ
ಆದಿಚುಂಚನಗಿರಿಯಲ್ಲಿ ಡಿಕೆಶಿ ಕಾರು ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಬಿಜಿಎಸ್ ಮೆಡಿಕಲ್ ಕಾಲೇಜು ಬಳಿ ಸಚಿವ ಡಿ.ಕೆ.ಶಿವಕುಮಾರ ಕಾರು ಪತ್ತೆಯಾಗಿದೆ.
ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದಶ್ರೀ ಗಳನ್ನು ಭೇಟಿ ಮಾಡಲು ಸಚಿವ ಡಿ.ಕೆ.ಶಿವಕುಮಾರ ಬಂದಿದ್ದರಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಶ್ರೀಗಳು ಪಾಲ್ಗೊಂಡಿದ್ದರು. ಹೀಗಾಗಿ ಸುಮಾರು ಅರ್ಧ ಗಂಟೆಯಿಂದ ಮೆಡಿಕಲ್ ಕಾಲೇಜು ಆವರಣದಲ್ಲಿ ಡಿಕೆಶಿ ಕಾರು ಮತ್ತು ಎಸ್ಕಾರ್ಟ್ ನಿಂತಿದ್ದವು. ಇ ಡಿ ಸಂಕಷ್ಟದಿಂದ ಪಾರಾಗಲು ಆದಿಚುಂಚನಗಿರಿಗೆ ಬಂದಿದ್ದರಾ ಡಿಕೆಶಿ ಎನ್ನುವ ಮಾತುಗಳು ಹರಿದಾಡಲಾರಂಭಿಸಿವೆ.