Select Your Language

Notifications

webdunia
webdunia
webdunia
webdunia

ಸಚಿವ ಡಿ.ಕೆ.ಶಿವಕುಮಾರ್‌ಯಿಂದ ಅಪ್ಪಾಜಿ ಗೌಡಗೆ ಅವಾಜ್

ಸಚಿವ ಡಿ.ಕೆ.ಶಿವಕುಮಾರ್‌ಯಿಂದ ಅಪ್ಪಾಜಿ ಗೌಡಗೆ ಅವಾಜ್
ಬೆಂಗಳೂರು , ಶುಕ್ರವಾರ, 28 ಅಕ್ಟೋಬರ್ 2016 (16:54 IST)
ಒಕ್ಕಲಿಗ ಸಂಘದಲ್ಲಿರುವ ಗೊಂದಲಗಳನ್ನು ಬಗೆಹರಿಸಿ, ಇಲ್ಲದಿದ್ದರೆ ನಿಮಗೆ ಪ್ಯಾಕಪ್ ಮಾಡಲು ಬರುತ್ತದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗ ಸಂಘದ ಅಧ್ಯಕ್ಷ ಅಪ್ಪಾಜಿಗೌಡರಿಗೆ ಎಚ್ಚರಿಕೆ ನೀಡಿದ್ದಾರೆ.
 
ಶ್ರೀಗಂಧ ಕಾವಲ್‌ನಲ್ಲಿ ನಡೆದ ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಚಿವರು, ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳ ಎದುರೇ ಒಕ್ಕಲಿಗ ಸಂಘದ ಅಧ್ಯಕ್ಷ ಅಪ್ಪಾಜಿಗೌಡರಿಗೆ ಧಮ್ಕಿ ಹಾಕಿದ್ದಾರೆ. 
 
ಇದೇ ವೇಳೆ ಮಾತನಾಡಿದ ಶಾಸಕ ಮುನಿರತ್ನ, ರಾಜಕಾರಣಿಗಳ ಆಳ್ವಿಕೆ ನೋಡಿ ಬೇಸರ ಮೂಡಿದೆ. ಸ್ವಾಮೀಜಿಯೊಬ್ಬರು 5 ವರ್ಷ ರಾಜ್ಯ ಆಳಬೇಕು ಎಂದು ಅಭಿಪ್ರಾಯಪಟ್ಟರು.
 
ಶಾಸಕರಿಗೆ ಮಾರ್ಮಿಕವಾಗಿ ಉತ್ತರ ನೀಡಿದ ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು, ಶಾಸಕರು ಹೇಳುವಂತೆ ಸ್ವಾಮೀಜಿಗಳು ರಾಜ್ಯ ಆಳುವುದು ಸಾಧ್ಯವಿಲ್ಲ. ಆದರೆ, ಶ್ರೀಗಳ ಸಂಕಲ್ಪ ಶಕ್ತಿಯಿಂದ, ಜ್ಞಾನ ಶಕ್ತಿಯಿಂದ ರಾಜಕಾರಣಿಗಳಿಗೆ ಹುದ್ದೆ ಸಿಗುತ್ತದೆ ಎಂದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜೆಎಎಂ ಸಂಘಟನೆ ಮುಖ್ಯಸ್ಥ ಭಯೋತ್ಪಾದಕ: ಮುಷರಫ್