Webdunia - Bharat's app for daily news and videos

Install App

ಹಾಲು ದುಬಾರಿ.. ಕಾಫೀ ಟಿ ಕೂಡ ದುಬಾರಿ

Webdunia
ಮಂಗಳವಾರ, 1 ಆಗಸ್ಟ್ 2023 (19:00 IST)
ರಾಜ್ಯದ ಜನರಿಗೆ ತಿಂಗಳ ಆರಂಭದಲ್ಲೇ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಒಂದು ಕಡೆ ತರಕಾರಿ ಆಯ್ತು. ಇದೀಗ ಹಾಲು ದುಬಾರಿ. ಇನ್ನು ಇಷ್ಟಕ್ಕೆ ಫುಲ್ ಸ್ಟಾಪ್ ಹಾಕದೇ ಹೋಟೆಲ್ ನಲ್ಲಿನ ಪ್ರೈಸ್ ಕೂಡ ಜಾಸ್ತಿ. ಅಬ್ಬಾ ಇಷ್ಟೆಲ್ಲಾ ದುಬಾರಿ ದುನಿಯಾದಲ್ಲಿ ಹೆಂಗಪ್ಪ ಜೀವನ ಅಂತಾ ಜನ ಫುಲ್ ಶಾಕ್ ಆಗ್ಬಿಟ್ಟಿದ್ದಾರೆ.ಒಂದು ಕಡೆ ಹಾಲಿನ ದರ ಏರಿಕೆಯ ಬಿಸಿ.. ಇನ್ನೊಂದು ಕಡೆ ಹೋಟೆಲ್ ತಿನಿಸುಗಳು ಕೂಡ ದುಬಾರಿ. ಹೌದು ನಂದಿನಿ ಹಾಲಿನ ದರ ಏರಿಕೆ ಇಂದಿನಿಂದ ಅಂದರೆ ಜಾರಿಗೆ ಬಂದಿದೆ. ಹಾಲು ಉತ್ಪಾದಕರ ಬೇಡಿಕೆ ಹಿನ್ನೆಲೆಯಲ್ಲಿ ನಂದಿನಿ ಹಾಲಿನ ಬೆಲೆ ಹೆಚ್ಚಳಕ್ಕೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೈನುಗಾರರಿಗೆ ಈ ದರ ಏರಿಕೆ ಒಂದಿಷ್ಟು ನಿಟ್ಟುಸಿರು ಬಿಡುವಂತೆ ಮಾಡಿದರೇ, ಇತ್ತ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. 

ಇನ್ನು ಹಾಲು, ದಿನಸಿ ಸೇರಿದಂತೆ ಇತರೆ ಬೆಲೆಗಳ ಏರಿಕೆ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಎಲ್ಲಾ ತಿಂಡಿ, ತಿನಿಸುಗಳ ದರವನ್ನು ಶೇ. 10ರಷ್ಟು ಹೆಚ್ಚಳ ಮಾಡಿದೆ. ಕಾಫಿ, ಟೀ, ಉಪಾಹಾರ, ಊಟ, ಚಾಟ್ಸ್‌ ಸೇರಿದಂತೆ ಎಲ್ಲ ಆಹಾರ ಪದಾರ್ಥಗಳ ದರ ಶೇ. 10ರಷ್ಟು ಹೆಚ್ಚಾಗಿದೆ. ಕಾಫಿ, ಟೀ ದರವು 2 ರಿಂದ 3 ರೂವರೆಗೆ ಜಾಸ್ತಿಯಾಗಿದೆ. ಹಾಗೆಯೇ, ದೋಸೆ, ಇಡ್ಲಿ, ವಡೆ, ರೈಸ್‌ಬಾತ್‌, ಬಿಸಿಬೇಳೆ ಬಾತ್‌, ಚೌಚೌ ಬಾತ್‌ ಮತ್ತಿತರ ತಿಂಡಿಗಳ ಬೆಲೆಯೂ 5 ರೂಪಾಯಿಯಷ್ಟು ಹೆಚ್ಚಾಗಿದೆ. ಊಟದ ದರವನ್ನು 5 ರಿಂದ 10 ರೂಪಾಯಿ ವರೆಗೆ ಏರಿಕೆ ಮಾಡಲು ಬೃಹತ್‌ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ ತೀರ್ಮಾನಿಸಿದೆ. 

ಯಾವ ಯಾವ ಹಾಲಿನ ಉತ್ಪನ್ನಗಳಿಗೆ ನೂತನ ದರ ಎಷ್ಟು ಅಂತಾ ನೋಡೋದಾದ್ರೆ..?
 
ಟೋಲ್ಡ್ ಮಿಲ್ಕ್ - 39 ಯಿಂದ 42
ಹೋಮೋಜೆನೈಸ್ಡ್ - 40 ಯಿಂದ 43
ಶುಭಂ ಹಾಲು -  45 ಯಿಂದ 48
ಮೊಸರು-  47 ಯಿಂದ 50 
ಮಜ್ಜಿಗೆ 200ml - 8 ಯಿಂದ 9
 
ಹೋಟೆಲ್ ಆಹಾರ ದರ ಎಷ್ಟು ಅಂತಾ ನೋಡೋದಾದ್ರೆ..?
 
ಊಟ -  100 ರಿಂದ 105 ಅಥವಾ 110
ಪೂರಿ (3)- 60 ರಿಂದ 65
ರೈಸ್ ಬಾತ್- 50 ರಿಂದ 55
ಚೌಚೌಬಾತ್-45 ರಿಂದ 55
ಇಡ್ಲಿ ವಡಾ - 60 ರಿಂದ 65
ಕಾಫಿ- ಟೀ - 18 ರಿಂದ 20
ಸಿಲಿಕಾನ್ ಸಿಟಿ ಮಂದಿಗೆ ಇನ್ನು ಮುಂದೆ ಹೋಟೆಲ್ ಊಟ ತಿಂಡಿ ಖಾರ ಖಾರವಾಗಲಿದೆ. ಇನ್ನು ಸತತ ಬೆಲೆ ಏರಿಕೆಯಿಂದಾಗಿ ನಷ್ಟ ಅನುಭವಿಸುತ್ತಿರುವ ಹೋಟೆಲ್ ಉದ್ಯಮಿಗಳು ಬೆಲೆ ಏರಿಕೆಗೆ ಮುಂದಾಗಿದ್ದಾರೆ ಎನ್ನುತ್ತಾರೆ. ಬೆಲೆ ಏರಿಕೆ ಸಾಧ್ಯತೆ ಹೆಚ್ಚಿದ್ದು ಸಾಮಾನ್ಯನ ಜೇಬಿಗೆ ಕತ್ತರಿ ಬೀಳುತ್ತಿದೆ ಎಂದು ಜನ ಸಾಮಾನ್ಯರು ಆಕ್ರೋಶ ಹೊರಹಾಕುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments