Select Your Language

Notifications

webdunia
webdunia
webdunia
webdunia

ಕ್ಯಾಪಿಟಲ್‌ ಹೋಟೆಲ್ ನಲ್ಲಿ ಕೈ ಮುಖಂಡರ ಸಭೆ

sidaramayya

geetha

bangalore , ಶನಿವಾರ, 10 ಫೆಬ್ರವರಿ 2024 (19:00 IST)
ಬೆಂಗಳೂರು : ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್‌ ನಾಯಕ ಚಿದಂಬರಂ ನೇತೃತ್ವದಲ್ಲಿ  ಶನಿವಾರ ನಗರದ ಕ್ಯಾಪಿಟಲ್‌ ಹೋಟೆಲ್‌ ನಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಎಐಸಿಸಿ ಪ್ರಣಾಳಿಕೆ ಸಮಿತಿ ಸಭೆ ಆಯೋಜಿಸಲಾಗಿದೆ.ಮುಂಬರುವ ಲೋಕಸಭಾ ಚುನಾವಣೆಯ ಪೂರ್ವಸಿದ್ದತೆಗಾಗಿ  ಸಭೆ ನಡೆಸಲಾಗುತ್ತಿದೆ. ರ್ನಾಟಕದಲ್ಲಿ ನೀಡಲಾಗುತ್ತಿರುವ ಗ್ಯಾರೆಂಟಿ ಯೋಜನೆ ಮಾದರಿಯನ್ನು ದೇಶಾದ್ಯಂತ ವಿಸ್ತರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಜೊತೆಗೆ ಮತದಾರರ ಸಂಕಷ್ಟಗಳನ್ನು, ಮೂಲಭೂತ ಕೊರತೆಗಳನ್ನು ಸಮೀಕ್ಷೆಯ ಮೂಲಕ ಕ್ರೋಢೀಕರಿಸಿ ಆ ಕೊರತೆಗಳನ್ನು ನೀಗಿಸುವ ಅಂಶಗಳನ್ನೂ ಸಹ ಪ್ರಣಾಳಿಕೆಯಲ್ಲಿ  ಸೇರಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ. 

ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌,ಸಚಿವ ಮಹದೇವಪ್ಪ ಸೇರಿದಂತೆ ಹಲವು ಹಿರಿಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಗುಜುರಿ ಅಂಗಡಿ ಬೆಂಕಿಗಾಹುತಿ