ಮಂಗಳೂರು ಬ್ಯಾಂಕ್ ದರೋಡೆಕೋರರ ಖತರ್ನಾಕ್ ಪ್ಲ್ಯಾನ್ ಬಹಿರಂಗ

Krishnaveni K
ಮಂಗಳವಾರ, 21 ಜನವರಿ 2025 (11:39 IST)
ಮಂಗಳೂರು: ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆಕೋರರ ಬಂಧನದ ಬಳಿಕ ಮಂಗಳೂರು ಪೊಲೀಸರ ಆರೋಪಿಗಳ ಖತರ್ನಾಕ್ ಪ್ಲ್ಯಾನ್ ಗಳನ್ನು ಒಂದೊಂದಾಗಿ ಬಿಚ್ಚಿಟ್ಟಿದ್ದಾರೆ.

ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲರೂ ತಮಿಳುನಾಡು ಮೂಲದವರು ಎಂದು ತಿಳಿದುಬಂದಿದೆ. ಇವರನ್ನು ಈಗ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಬಂಧನದ ಬಳಿಕ ಮಾಧ್ಯಮಗಳಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಒಟ್ಟು ಆರು ಮಂದಿ ದರೋಡೆಯಲ್ಲಿ ಪಾಲ್ಗೊಂಡಿದ್ದಾರೆ. ಇವರಲ್ಲಿ ಮುರುಗಂಡಿ ದೇವರ್ ಮುಖ್ಯಸ್ಥನಾಗಿದ್ದ. ಮಹಾರಾಷ್ಟ್ರ ಮೂಲದ ಫೀಯೆಟ್ ಕಾರು ಬಳಸಿದ್ದರು. ದರೋಡೆ ಬಳಿಕ ಗೋಣಿ ಚೀಲದ ಜೊತೆಗೆ ಆರೋಪಿಗಳು 700 ಕಿ.ಮೀ. ಪ್ರಯಾಣ ಮಾಡಿದ್ದರು.

ತಮಿಳುನಾಡಿನ ತಿರುವನ್ವೇಲಿಗೆ ತೆರಳಿದ್ದಾರೆ. ಇಲ್ಲಿಯವರೆಗೂ ಮುರುಗಂಡಿ ದೇವರ್ ನೇ ಕಾರು ಚಲಾಯಿಸಿದ್ದ. ದರೋಡೆಗೆ ಈತ ಎರಡು ತಿಂಗಳಿನಿಂದ ಪ್ಲ್ಯಾನ್ ರೂಪಿಸಿದ್ದ. ಎರಡು ತಿಂಗಳ ಮೊದಲೇ ಮಂಗಳೂರಿಗೆ ಬಂದು ಕೋಟೆಕಾರ್ ಬ್ಯಾಂಕ್ ಸುತ್ತಮುತ್ತಲ ಪರಿಸರ ಗಮನಿಸಿದ್ದ.

ಎಲ್ಲಾ ಪ್ಲ್ಯಾನ್ ಮಾಡಿಕೊಂಡ ಮೇಲೆ ತಮಿಳುನಾಡಿಗೆ ಮರಳಿದ್ದ. ಅದಾದ ಬಳಿಕ ತನ್ನ ಸಹಚರರೊಂದಿಗೆ ದರೋಡೆಗೆ ಬಂದಿದ್ದ. ಈ ಪೈಕಿ ಓರ್ವ ಹೊರಗಿನಿಂದ ನಿಂತು ಸಹಾಯ ಮಾಡಿದ್ದ. ಉಳಿದ ಐವರು ದರೋಡೆಗೆ ಬಂದಿದ್ದರು. ಬಂಧಿತರಿಂದ ಈಗ ದರೋಡೆ ಮಾಡಿದ್ದ ಚಿನ್ನದ ಜೊತೆಗೆ ಪಿಸ್ತೂಲ್, ತಲ್ವಾರ್ ನನ್ನೂ ವಶಕ್ಕೆ ಪಡೆಯಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತಕ್ಕೆ ಬಂದ ವ್ಲಾಡಿಮಿರ್ ಪುಟಿನ್ ಎಲ್ಲೂ ಮಾಡದ ಕೆಲಸವನ್ನು ಇಲ್ಲಿ ಮಾಡಿದ್ರು

ಮತಿಗೇಡಿಗಳಾದ್ರೂ ಪರವಾಗಿಲ್ಲ, ಲಜ್ಜೆಗೇಡಿಯಾಗಬಾರದು: ಸಿದ್ದರಾಮಯ್ಯಗೆ ಅಶೋಕ್ ಟಾಂಗ್

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕುರ್ಚಿ ಫೈಟ್ ಗೆ ಟ್ವಿಸ್ಟ್ ಕೊಡ್ತಿರೋದು ಇವರೇ

Karnataka Weather: ಚಳಿ ನಡುವೆಯೂ ಇಂದು ಈ ಜಿಲ್ಲೆಗಳಲ್ಲಿ ಮಳೆ

ವಾಚ್ ಪ್ರಶ್ನೆಯೆತ್ತಿದ ನಾರಾಯಣಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ ಪ್ರತಿಕ್ರಿಯೆ

ಮುಂದಿನ ಸುದ್ದಿ
Show comments