Select Your Language

Notifications

webdunia
webdunia
webdunia
webdunia

ತಮ್ಮ ಹಾಗೇ ತೃತೀಯ ಲಿಂಗಿಯಾಗಲು ಒಪ್ಪದಕ್ಕೆ ಮರ್ಮಾಂಗನ್ನೇ ಕತ್ತರಿಸಿದ ಮಂಗಳಮುಖಿಯರು

ತಮ್ಮ ಹಾಗೇ ತೃತೀಯ ಲಿಂಗಿಯಾಗಲು ಒಪ್ಪದಕ್ಕೆ ಮರ್ಮಾಂಗನ್ನೇ ಕತ್ತರಿಸಿದ ಮಂಗಳಮುಖಿಯರು

Sampriya

ಬೆಂಗಳೂರು , ಬುಧವಾರ, 21 ಆಗಸ್ಟ್ 2024 (16:03 IST)
Photo Courtesy X
ಬೆಂಗಳೂರು: ತೃತೀಯ ಲಿಂಗಿಗಳು ಹೊಟ್ಟೆ ಪಾಡಿಗಾಗಿ ರೈಲು ನಿಲ್ದಾಣ, ಬಸ್‌ ನಿಲ್ದಾಣ ಹಾಗೂ ಮಾರುಕಟ್ಟೆಗಳಲ್ಲಿ ಭಿಕ್ಷಾಟನೆ ಮಾಡುತ್ತಾರೆ. ಕೆಲವೊಂದು ಬಾರಿ ಕೇಳಿದ ಹಣ ನೀಡದೆ ಇದ್ದಾಗ ಇವರು ಪುರುಷರ ಜತೆ ಜಗಳಕ್ಕೆ ಬೀಳುವುದು ಉಂಟು. ಆದರೆ ಇಲ್ಲೊಂದು ತೃತೀಯ ಲಿಂಗಿಗಳ ಗುಂಪು,  ತಮ್ಮ ಹಾಗೇ ತೃತೀಯ ಲಿಂಗಿಯಾಗಲು ಒ‍ಪ್ಪದಿರುವುದಕ್ಕೆ ಕೋಪಗೊಂಡು ಯುವಕನ ಮರ್ಮಾಂಗವನ್ನೇ ಕತ್ತರಿಸಿ ಮೃಘೀಯವಾಗಿ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ.

ತಮ್ಮ ಹಾಗೇ ತೃತೀಯ ಲಿಂಗಿಯಾಗಲು ಒಪ್ಪದಕ್ಕೆ ಯುವಕನ ಪ್ರಜ್ಞೆ ತಪ್ಪಿಸಿ, ಆತನ ಮರ್ಮಾಂಗವನ್ನೇ ಕತ್ತರಿಸಿದ್ದಾರೆ. ಅದಲ್ಲದೆ ಅವನನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಇನ್ನೂ ಅಲ್ಲಿಂದ್ದ ಹೋಗಬೇಕೆಂದರೆ 5 ಲಕ್ಷ ರೂಪಾಯಿ ಹಣದ ಬೇಡಿಕೆಯಿಟ್ಟಿದ್ದಾರೆ. ಇದೆಲ್ಲದ್ದರಿಂದ ಬೇಸತ್ತ ಯುವಕ ಅವರಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಯುವಕನ ದೂರಿನ ಆಧಾರದ ಮೇಲೆ ಬೆಂಗಳೂರಿನ ಪುಲಕೇಶಿನಗರದ ಪೊಲೀಸ್ ಠಾಣೆ ಪೊಲೀಸರು ತೃತೀಯ ಲಿಂಗಿಗಳಾದ ಮುಗಿಲ, ಚಿತ್ರಾ, ಅಶ್ವಿನಿ, ಕಾಜಲ್ ಹಾಗೂ ಪ್ರೀತಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಂತ್ರಸ್ತ (18 ವರ್ಷ ವಯಸ್ಸು) ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿ ಸೇರಿದಂತೆ 42ಮಹಿಳೆಯನ್ನು ಹತ್ಯೆ ಮಾಡಿದ್ದ ಸೀರಿಯಲ್ ಕಿಲ್ಲರ್ ಜೈಲಿನಿಂದ ಎಸ್ಕೇಪ್