Publish Date: Sun, 13 Nov 2022 (16:22 IST)
Updated Date: Sun, 13 Nov 2022 (16:28 IST)
ಕಳೆದ ಆಗಸ್ಟ್ ತಿಂಗಳಲ್ಲಿ ಗೃಹಪ್ರವೇಶದ ಮನೆಗೆ ನುಗ್ಗಿ ಮಂಗಳಮುಖಿಯರು ರಾಮಮೂರ್ತಿ ನಗರದಲ್ಲಿ ಧಾಂದಲೆ ನಡೆಸಿದ್ರು. ಸದ್ಯ ಈಗ ಕನಕಪುರ ರಸ್ತೆಯ ಗುಬ್ಬಲಾಳದಲ್ಲಿಯೂ ಕೂಡ ಮಂಗಳಮುಖಿರಿಂದ ಧಾಂದಲೆ ನಡೆದಿದೆ ,ಗೃಹಪ್ರವೇಶ ಕಾರ್ಯಕ್ರಮದಲ್ಲಿ ಹಣ ನೀಡುವಂತೆ ಆಗ್ರಹಿಸಿದ್ದಾರೆ.ಹಣ ನೀಡಲು ನಿರಾಕರಿಸಿದಕ್ಕೆ ಬಟ್ಟೆ ಬಿಚ್ಚಲು ಮುಂದಾದ ಮಂಗಳಮುಖಿಯರು ದುರ್ವರ್ತನೆ ತೋರಿ ಹುಚ್ಚಾಟ ತೋರಿದ್ದಾರೆ.ಯಾವ ಪೊಲೀಸ್ ಬಂದ್ರೂ ಅವನೇನ್ ಮಾಡ್ತಾನೆ ಅಂತಾ ಅವಾಜ್ ಹಾಕಿ ಬೇಕಾದ್ರೆ ಐ.ಜಿ. ಕರೆಸಿ ನಾವು ಹಣ ಪಡೆಯದೆ ಇಲ್ಲಿಂದ ಹೋಗಲ್ಲ ಗುಂಡಾವರ್ತನೆ ತೋರಿದ್ದಾರೆಂದು ಮನೆಯವರು ಆರೋಪಿಸಿದ್ದಾರೆ. ಮಂಗಳಮುಖಿಯರ ವರ್ತನೆಗೆ ಬೇಸತ್ತ ಮನೆ ಮಾಲಿಕ ಹಣ ನೀಡಿ ಮಂಗಳಮುಖಿಯರನ್ನ ಸಾಗಾಕಿದ್ದಾನೆ.ಇನ್ನೂ ಕುರಿತು ಟ್ವೀಟರ್ ನಲ್ಲಿ ಮಾಹಿತಿ ಹಂಚಿಕೊಂಡ ಮನೆ ಮಾಲೀಕ ವಾಸಸ್ಥಳದ ಗಲಾಟೆಯನ್ನು ವಿಡಿಯೋ ಸಮೇತಾ ಪೋಸ್ಟ್ ಸಿಎಂ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಹಾಗೂ ಕಮಿಷನರ್ ಗೆ ಟ್ಯಾಗ್ ಮಾಡಿದ್ದಾರೆ.