Publish Date: Wed, 15 Jan 2020 (10:36 IST)
Updated Date: Wed, 15 Jan 2020 (10:41 IST)
ವಿಜಯಪುರ : ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಹಣದ ಆಮಿಷಯೊಡ್ಡಿ ಮಂಚಕ್ಕೆ ಕರೆದ ವಿವಾಹಿತ ಸಿವಿಲ್ ಕಾಂಟ್ರ್ಯಾಕ್ಟರ್ ಗೆ ಆಕೆಯ ಸಂಬಂಧಿಕರು ಧರ್ಮದೇಟು ನೀಡಿದ ಘಟನೆ ವಿಜಯಪುರದ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ.
ಮೋತಿಸಾಬ್ ತಳೇವಾಡ ಧರ್ಮದೇಟು ತಿಂದ ಕಾಮುಕ, ಈತನಿಗೆ ಮದುವೆಯಾಗಿದ್ದರೂ ಕೂಡ ತನಗೆ ಪರಿಚಯವಿರುವ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಫೋಟೋಗಳನ್ನು ತೆಗೆದುಕೊಂಡು ನಿನಗೆ ಕೇಳಿದಷ್ಟು ಹಣ ಕೊಡುವೆ ಮಂಚಕ್ಕೆ ಬಾ ಎಂದು ಕರೆದಿದ್ದಾನೆ.
ಪ್ರತಿದಿನ ಈ ರೀತಿ ಪೀಡಿಸುತ್ತಿದ್ದ ಈತನ ಬಗ್ಗೆ ಯುವತಿ ತನ್ನ ಸಂಬಂಧಿಕರಿಗೆ ತಿಳಿಸಿದ ಹಿನ್ನಲೆಯಲ್ಲಿ ಆಕೆಯ ಸಂಬಂಧಿಕರೆಲ್ಲಾ ಸೇರಿ ಆತನಿಗೆ ಹಿಗ್ಗಾಮಗ್ಗಾ ಥಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ನಿಡಗುಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.