Select Your Language

Notifications

webdunia
webdunia
webdunia
webdunia

ಸತ್ತ ವ್ಯಕ್ತಿ ಎದ್ದು ಕೂತ; ದಿಕ್ಕಾಪಾಲಾಗಿ ಓಡಿದ ಜನರು

ಸತ್ತ ವ್ಯಕ್ತಿ ಎದ್ದು ಕೂತ; ದಿಕ್ಕಾಪಾಲಾಗಿ ಓಡಿದ ಜನರು
ಯಾದಗಿರಿ , ಗುರುವಾರ, 23 ಫೆಬ್ರವರಿ 2017 (12:23 IST)
ಶವಸಂಸ್ಕಾರಕ್ಕೆ ತಯಾರಿ ನಡೆಸುತ್ತಿದ್ದಾಗ ಸತ್ತವ್ಯಕ್ತಿ ಎದ್ದು ಕುಳಿತ ಪವಾಡಸದೃಶ ಘಟನೆ ಯಾದಗಿರಿ ಜಿಲ್ಲೆಯ ಸುರಪುರದ ಮದನಿಂಗನಾಳ ಗ್ರಾಮದಲ್ಲಿ ನಡೆದಿದೆ.
 
ಈ  ಪವಾಡಸದೃಶ ಘಟನೆಗೆ ಸಾಕ್ಷಿಯಾದ ವ್ಯಕ್ತಿಯ ಹೆಸರು ನಿಂಗಪ್ಪ( 54) . 
 
ಕಳೆದ ಫೆಬ್ರವರಿ 16 ರಂದು ನಿಂಗಪ್ಪನಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ತುರ್ತು ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕು ಎಂದಿದ್ದ ವೈದ್ಯರು ಎರಡು ದಿನ ತೀವ್ರ ನಿಗಾ ಘಟಕದಲ್ಲಿಟ್ಟಿದ್ದರು. ಆದರೆ ಆಗ ಕೋಮಾ ಸ್ಥಿತಿಗೆ ತಲುಪಿದ್ದ ನಿಂಗಪ್ಪ ಸುಧಾರಿಸಿಕೊಳ್ಳುವ ಲಕ್ಷಣವನ್ನು ತೋರಲಿಲ್ಲ. ಹೀಗಾಗಿ ವೈದ್ಯರು ಒಂದು ಗಂಟೆ ಬದುಕುವುದು ಜಾಸ್ತಿ. ಮನೆಗೊಯ್ಯಿರಿ ಎಂದಿದ್ದಾರೆ. ಅಂಬುಲೆನ್ಸ್‌ನಲ್ಲಿ ಅವರನ್ನು ಮನೆಗೊಯ್ಯುವಾಗ ಮಾರ್ಗ ಮಧ್ಯದಲ್ಲಿ ಅವರ ಉಸಿರಾಟ ನಿಂತಿದ್ದು, ಅಂಬುಲೆನ್ಸ್ ಸಿಬ್ಬಂದಿ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ.
 
ಫೆಬ್ರವರಿ 19 ರಂದು ಮನೆ ಮುಂದೆ ಅವರ ದೇಹವನ್ನಿಟ್ಟುಕೊಂಡು ಸಂಪೂರ್ಣ ರಾತ್ರಿ ಭಜನೆಯನ್ನು ನಡೆಸಲಾಗಿದೆ. ರಾತ್ರಿ ಎಲ್ಲ ಮಿಸುಕಾಡದ ನಿಂಗಪ್ಪ ಫೆಬ್ರವರಿ 20 ರ ಬೆಳಗಿನ ಜಾವ 4ಗಂಟೆ ಸುಮಾರಿಗೆ ಏಕಾಏಕಿ ಎದ್ದು ಕುಳಿತಿದ್ದಾರೆ. ಇದರಿಂದ ಬೆದರಿದ ಜನರು ಎದ್ನೋ ಬಿದ್ನೋ ಎಂದು ಅಲ್ಲಿಂದ ಓಟಕ್ಕಿತ್ತಿದ್ದಾರೆ.
 
ಮತ್ತೀಗ ನಿಂಗಪ್ಪ ಆರಾಮಾಗಿ ಓಡಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ದರೋಡೆಗಿಳಿದ ಪಿಯುಸಿ ರಾಂಕ್ ಸ್ಟೂಡೆಂಟ್!