Publish Date: Sat, 17 Dec 2022 (20:17 IST)
Updated Date: Sat, 17 Dec 2022 (20:22 IST)
ಬೆಂಗಳೂರಿನಲ್ಲಿ ಬಾವಿಗೆ ಬಿದ್ದು ಶಿವು (26) ಎಂಬಾತ ಸಾವನ್ನಪ್ಪಿದಾನೆ.ಬಾವಿಗೆ ಗ್ರಿಲ್ ಅಳವಡಿಸುವ ವೇಳೆ ದುರಂತ ಸಂಭವಿಸಿದೆ.ಯಾವುದೇ ಸುರಕ್ಷಾ ಕ್ರಮಗಳ ಅನುಸರಿಸದೆ ಶಿವು ಕೆಲಸ ನಿರ್ವಹಿಸ್ತಿದ್ದ.ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ.ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟುದೆ.
ಬಾವಿಯ ಜಾಲರಿ ಸರಿ ಮಾಡುವಾಗ ದುರಂತ ಸಂಭವಿಸಿದ್ದು,ನಗರದ ಡಿಜೆಹಳ್ಳಿಯಲ್ಲಿ ಇಂದು ಮುಂಜಾನೆ ಘಟನೆ ನಡೆದಿದೆ.15 ದಿನದ ಹಸುಗೂಸಿನೊಂದಿಗೆ ಪತ್ನಿಯ ಆಕ್ರಂದನ ಮುಗಿಲುಮುಟ್ಟಿದೆ. ಮನೆಯ ಪಕ್ಕದಲ್ಲಿಯೇ ಇದ್ದ ಬಾವಿಗೆ ಯಾವುದೇ ಸುರಕ್ಷತಾ ಸಾಧನಗಳಿಲ್ಲದೇ ವೆಲ್ಡಿಂಗ್ ಕೆಲ್ಸಕ್ಕೆ ಶಿವು ಮತ್ತು ಕೆಲಸಗಾರರು ಇಳಿದಿದ್ರು.ಸುರಕ್ಷತಾ ಸಾಧನವಿಲ್ಲದೇ ಕೆಲ್ಸ ಮಾಡಿದ್ರಿಂದ ಘಟನೆ ಸಂಭವಿಸಿದೆ.
10 ವರ್ಷಗಳ ಹಿಂದೆಯೂ ಒಬ್ಬ ವ್ಯಕ್ತಿ ಇದೇ ಬಾವಿಗೆ ಬಿದ್ದು ಸತ್ತಿದ್ದ.ಶಾಸಕರ ಕಡೆಯಿಂದ ದುರಸ್ಥಿ ಕೆಲಸ ನಡೀತಾ ಇತ್ತು ಅಂತ ಕುಟುಂಬಸ್ಥರ ಆರೋಪ ಮಾಡಿದ್ದು,ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.