Webdunia - Bharat's app for daily news and videos

Install App

Mallikarjun Kharge: ಮಾರಾಯಾ ನಿನ್ನ ಇಂಗ್ಲಿಷ್ ತಗೊಂಡು ನಾವೇನು ಮಾಡೋಣ ಮೋದಿ, ದೇಶಕ್ಕೆ ಭದ್ರತೆ ಕೊಡಿ: ಮಲ್ಲಿಕಾರ್ಜುನ ಖರ್ಗೆ

Krishnaveni K
ಶುಕ್ರವಾರ, 2 ಮೇ 2025 (09:07 IST)
ಬೆಂಗಳೂರು: ಪಹಲ್ಗಾಮ್ ಉಗ್ರ ದಾಳಿ ಬಳಿಕ ಪ್ರಧಾನಿ ಮೋದಿ ಬಿಹಾರದಲ್ಲಿ ಇಂಗ್ಲಿಷ್ ನಲ್ಲಿ ಭಾಷಣ ಮಾಡಿದ್ದನ್ನು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ. ಮಾರಾಯಾ ನಿನ್ನ ಇಂಗ್ಲಿಷ್ ತಗೊಂಡು ನಾವೇನು ಮಾಡೋಣ, ಮೊದಲು ಭದ್ರತೆ ಕೊಡಿ ಎಂದಿದ್ದಾರೆ.

ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಸರ್ವ ಪಕ್ಷ ಸಭೆ ಕರೆಯಲಾಗಿತ್ತು. ಆದರೆ ಪ್ರಧಾನಿ ಮೋದಿ ಸಭೆಗೆ ಬರಲಿಲ್ಲ. ಪ್ರಧಾನಿ ಮೋದಿ ಬಿಹಾರದಲ್ಲಿ ಚುನಾವಣೆ ಭಾಷಣ ಮಾಡುತ್ತಿದ್ದರು. ಅರ್ಧ ಇಂಗ್ಲಿಷ್, ಅರ್ಧ ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರು. ಅರೇ ಇಂಗ್ಲಿಷ್ ನಲ್ಲಿ ಯಾಕೆ ಎಂದು ಕೇಳಿದ್ದಕ್ಕೆ ಇಡೀ ವಿಶ್ವಕ್ಕೇ ಮೋದಿ ಹೆದರಿಲ್ಲ ಎಂದು ತೋರಿಸಿಕೊಡಲು ಇಂಗ್ಲಿಷ್ ನಲ್ಲಿ ಭಾಷಣ ಮಾಡಿದ್ದಾಗಿ ಹೇಳಿದರು.

ಮಾರಾಯಾ.. ನಿನ್ನ ಇಂಗ್ಲಿಷ್ ಕಟ್ಕೊಂಡು ನಾವೇನು ಮಾಡೋಣ. ಮೊದಲು ದೇಶಕ್ಕೆ ಭದ್ರತೆ ಕೊಡು. ಗಡಿಭದ್ರತಾ ಪಡೆಗಳು, ಸೈನಿಕರು, ಪೊಲೀಸರು ಎಲ್ಲಾ ಇದ್ದೂ ಪಹಲ್ಗಾಮ್ ನಲ್ಲಿ ಭದ್ರತೆ ಕೊರತೆಯಿಂದ ದಾಳಿಯಾಯ್ತು.

ಮೊದಲು ದೇಶ. ಆ ಬಳಿಕವಷ್ಟೇ ನಿಮ್ಮ ಧರ್ಮ, ಪಾರ್ಟಿ, ಜಾತಿ ಎಲ್ಲಾ ಬರುತ್ತದೆ. ದೇಶಕ್ಕೆ ಭದ್ರತೆ ಕೊಡುವುದು ಮುಖ್ಯ’ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈ ಕಾರಣಕ್ಕೆ ಜಾತಿ ಗಣತಿ ಆಗಬೇಕು ಅಂತಿದ್ರು ರಾಹುಲ್ ಗಾಂಧಿ: ಮಧು ಬಂಗಾರಪ್ಪ

ಇಂಡೋ- ಪಾಕ್ ಗಡಿಯಲ್ಲಿ ಶಾಂತವಾಗಿ ನೆಲೆಸಿದ ಸರ್ಕಾರಿ ಶಾಲೆ, ಯುದ್ದ ಸಂದರ್ಭದಲ್ಲಿ ಏನ್‌ ಮಾಡ್ತಾರೆ ಗೊತ್ತಾ

Mangaluru Suhas Shetty: ಸುಹಾಸ್ ಶೆಟ್ಟಿ ಹತ್ಯೆಗೆ ಹಂತಕರು ಭಯಾನಕ ಪ್ಲ್ಯಾನ್ ಮಾಡಿದ್ದ ಹಂತಕರು: ಮೀನಿನ ಟೆಂಪೊ ಮಧ್ಯೆ ಬಂದಿದ್ದೇಕೆ

Suhas Shetty, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ತಕ್ಷಣವೇ ಕ್ರಮ: ಸಿದ್ದರಾಮಯ್ಯ

Mangaluru Suhas Shetty murder: ಸುಹಾಸ್ ಶೆಟ್ಟಿ ಕುಟುಂಬಸ್ಥರ ಭೇಟಿ ಮಾಡಿ 25 ಲಕ್ಷ ರೂ ಪರಿಹಾರ ಭರವಸೆ ಕೊಟ್ಟ ವಿಜಯೇಂದ್ರ

ಮುಂದಿನ ಸುದ್ದಿ
Show comments