ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಒಂದು ಆಕಸ್ಮಿಕ ಘಟನೆ. ಅದಕ್ಕೆ ನಮ್ಮವರು ಕ್ಷಮೇನೂ ಕೇಳವ್ರೆ. ಅದಕ್ಕೀಗ ವಿವಾದ ಯಾಕೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ಆರ್ ಸಿಬಿ ವಿಜಯೋತ್ಸವ ಏನೋ ನ್ಯಾಷನಲ್ ಈವೆಂಟ್ ಆಗ್ಲಿ ಅಂತ ಮಾಡಿದ್ದಾರೆ. ಏನೋ ಆಗಿ ಹೋಗಿದೆ. ಅದರ ಬಗ್ಗೆ ನಮಗೆ ನೋವಿದೆ. ಅದಕ್ಕೆ ಕ್ಷಮೆಯನ್ನೂ ಕೇಳವ್ರೆ. ಪ್ರಾಣ ಕಳೆದುಕೊಂಡವರ ಕುಟುಂಬದವರನ್ನು ನೋಡುವಾಗ ನೋವಾಗುತ್ತದೆ ಎಂದಿದ್ದಾರೆ.
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ ನಮ್ಮ ನಾಯಕರು ರಾಜೀನಾಮೆ ಕೊಡಬೇಕಾಗಿಲ್ಲ ಎಂದಿದ್ದಾರೆ. ಯಾವುದೋ ಒಂದು ಘಟನೆಯನ್ನು ಉದ್ದೇಶಪೂರ್ವಕವಾಗಿ ಮಾಡಿದ್ರೆ ಅದು ತಪ್ಪು. ಇದು ಆಕಸ್ಮಿಕವಾಗಿ ನಡೆದಿದೆ. ಅದಕ್ಕೆ ರಾಜೀನಾಮೆ ಕೊಡಬೇಕಾಗಿಲ್ಲ.
ಹಿಂದೆ ಕುಂಬಮೇಳದಲ್ಲಿ ಸಾಕಷ್ಟು ಜನ ಕಾಲ್ತುಳಿತದಲ್ಲಿ ಸಾವನ್ನಪ್ಪಿದರು. ಅವರು ರಾಜೀನಾಮೆ ಕೊಟ್ರಾ? ನಾನು ಹೇಳಿದಾಗ ನನ್ನನ್ನೇ ಬೈದರು. ನಾವು ಕೆಸರು ಎರಚುವ ಕೆಲಸ ಮಾಡಕ್ಕೆ ಹೋಗಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.