Select Your Language

Notifications

webdunia
webdunia
webdunia
webdunia

Mallikarjun Kharge: ಕಾಲ್ತುಳಿತ ಆಕಸ್ಮಿಕವಾಗಿ ನಡೆದಿದ್ದು ನಮ್ಮವ್ರು ಕ್ಷಮೇನೂ ಕೇಳವ್ರೆ: ಮಲ

Mallikarjun Kharge

Krishnaveni K

ಬೆಂಗಳೂರು , ಬುಧವಾರ, 11 ಜೂನ್ 2025 (14:15 IST)
ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಒಂದು ಆಕಸ್ಮಿಕ ಘಟನೆ. ಅದಕ್ಕೆ ನಮ್ಮವರು ಕ್ಷಮೇನೂ ಕೇಳವ್ರೆ. ಅದಕ್ಕೀಗ ವಿವಾದ ಯಾಕೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
 

ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ಆರ್ ಸಿಬಿ ವಿಜಯೋತ್ಸವ ಏನೋ ನ್ಯಾಷನಲ್ ಈವೆಂಟ್ ಆಗ್ಲಿ ಅಂತ ಮಾಡಿದ್ದಾರೆ. ಏನೋ ಆಗಿ ಹೋಗಿದೆ. ಅದರ ಬಗ್ಗೆ ನಮಗೆ ನೋವಿದೆ. ಅದಕ್ಕೆ ಕ್ಷಮೆಯನ್ನೂ ಕೇಳವ್ರೆ. ಪ್ರಾಣ ಕಳೆದುಕೊಂಡವರ ಕುಟುಂಬದವರನ್ನು ನೋಡುವಾಗ ನೋವಾಗುತ್ತದೆ ಎಂದಿದ್ದಾರೆ.

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ ನಮ್ಮ ನಾಯಕರು ರಾಜೀನಾಮೆ ಕೊಡಬೇಕಾಗಿಲ್ಲ ಎಂದಿದ್ದಾರೆ. ಯಾವುದೋ ಒಂದು ಘಟನೆಯನ್ನು ಉದ್ದೇಶಪೂರ್ವಕವಾಗಿ ಮಾಡಿದ್ರೆ ಅದು ತಪ್ಪು. ಇದು ಆಕಸ್ಮಿಕವಾಗಿ ನಡೆದಿದೆ. ಅದಕ್ಕೆ ರಾಜೀನಾಮೆ ಕೊಡಬೇಕಾಗಿಲ್ಲ.

ಹಿಂದೆ ಕುಂಬಮೇಳದಲ್ಲಿ ಸಾಕಷ್ಟು ಜನ ಕಾಲ್ತುಳಿತದಲ್ಲಿ ಸಾವನ್ನಪ್ಪಿದರು. ಅವರು ರಾಜೀನಾಮೆ ಕೊಟ್ರಾ? ನಾನು ಹೇಳಿದಾಗ ನನ್ನನ್ನೇ ಬೈದರು. ನಾವು ಕೆಸರು ಎರಚುವ ಕೆಲಸ ಮಾಡಕ್ಕೆ ಹೋಗಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka caste census: 165 ಕೋಟಿ ರೂ. ಖರ್ಚು ಮಾಡಿದ್ದಕ್ಕೆ ಯಾರು ಹೊಣೆ: ವಿ.ಸುನೀಲ್ ಕುಮಾರ್